ಬೆಂಗಳೂರು: ಚುನಾವಣ ಪ್ರಚಾರ ಮಾಡುವ ನಟರ ಚಲನಚಿತ್ರಗಳ ಪ್ರದರ್ಶನಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಚುನಾವಣ ಆಯೋಗ ತಿಳಿಸಿದೆ.
ನಟ ಕಿಚ್ಚ ಸುದೀಪ್ ಮುಖ್ಯ ಮಂತ್ರಿ ಪರ ಚುನಾವಣ ಪ್ರಚಾರ ಮಾಡುವ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಧಿಕಾರಿಗಳು, ಯಾರೇ ಸಿನೆಮಾ ನಟರು ಯಾವುದೇ ಪಕ್ಷ , ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರೆ ಅಂಥವರ ಚಿತ್ರಗಳನ್ನು ಸರಕಾರದ ವೆಚ್ಚದಲ್ಲಿ ನಡೆಯುವ ಮಾಧ್ಯಮ ಅಥವಾ ಚಾನಲ್ಗಳಲ್ಲಿ ಪ್ರಸಾರ ಮಾಡು ವಂತಿಲ್ಲ.
ಆದರೆ ಖಾಸಗಿಯಾಗಿ ಸಿನೆಮಾ ಪ್ರದರ್ಶನಕ್ಕೆ ಅಭ್ಯಂತರ ಇಲ್ಲ ಎಂದಿದ್ದಾರೆ.