Breaking News
Home / ರಾಜಕೀಯ / ನಾಳೆಯ ಕೇಂದ್ರ ಬಜೆಟ್‌ನಲ್ಲಿ ನಮಗೇನು?

ನಾಳೆಯ ಕೇಂದ್ರ ಬಜೆಟ್‌ನಲ್ಲಿ ನಮಗೇನು?

Spread the love

ಹುನಿರೀಕ್ಷಿತ ಕೇಂದ್ರ ಬಜೆಟನ್ನು ಫೆ. 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. ಪ್ರಸಕ್ತ ವರ್ಷ ಕರ್ನಾಟಕ ಸಹಿತ 9 ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಜತೆಗೆ ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ಇದೆ. ವೇತನದಾರರಿಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಅನುಕೂಲವಾಗಬಹುದೇ, ಗೃಹ ಸಾಲ ಪಡೆಯುವವರಿಗೇನು ಸಿಗಲಿದೆ ಎಂಬ ನಿರೀಕ್ಷೆ ಸಹಜ.

ಇವೆಲ್ಲದಕ್ಕೆ ಪೂರಕವಾಗಿ ಜ. 31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.

ಐ.ಟಿ. ವಿನಾಯಿತಿ
6 ಲಕ್ಷ ರೂ?
ಆದಾಯ ತೆರಿಗೆ ವಿನಾಯಿತಿ 6 ಲಕ್ಷ ರೂ.ಗೆ ಏರಿಸುವ ನಿರೀಕ್ಷೆ. 2014ರಲ್ಲಿ 2.5 ಲಕ್ಷ ರೂ. ನಿಗದಿಯಾದದ್ದು ಮತ್ತೆ ಬದಲಾಗಿಲ್ಲ.

ಗೃಹ ಸಾಲಗಾರರಿಗೆ ಇದೆ ನಿರೀಕ್ಷೆ
ಮನೆ/ಅಪಾರ್ಟ್‌ಮೆಂಟ್‌ ಖರೀದಿಗಾಗಿ ಸಾಲ ಮಾಡಿದವರಿಗೆ ಸದ್ಯ 2 ಲಕ್ಷ ರೂ. ವರೆಗೆ ವಿನಾಯಿತಿ ಇದೆ. ಅದು 4 ಲಕ್ಷ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಚುನಾವಣೆಯ ಅನಿವಾರ್ಯ
ಕರ್ನಾಟಕ ಸೇರಿ 9 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮತಗಳಿಕೆಯ ಯೋಜನೆಗಳ ಪ್ರಕಟ ಸಾಧ್ಯತೆ.

ಕೃಷಿ ತಾಂತ್ರಿಕತೆಗೆ ಒತ್ತು
ಶೇ. 50 ಮಂದಿ ಕೃಷಿಯನ್ನೇ ಉದ್ಯೋಗಕ್ಕಾಗಿ ನಂಬಿದ್ದಾರೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಲು ಆದ್ಯತೆ ನೀಡುವಂಥ ಕ್ರಮ ಸಂಭಾವ್ಯ.

ಸವಾಲುಗಳೇನು?
-ಶೇ. 6.4ರಷ್ಟು ಇರುವ ವಿತ್ತೀಯ ಕೊರತೆ ನಿಯಂತ್ರಿಸಲು ಕ್ರಮ
-ಸಂಭಾವ್ಯ ಆರ್ಥಿಕ ಹಿಂಜರಿತ ಎದುರಿಸಲು ವೆಚ್ಚ ಕಡಿತಕ್ಕೆ ಕ್ರಮ
-ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ
-ರಫ್ತು ಪ್ರಮಾಣ ಏರಿಸಲು ಪ್ರಯತ್ನ
-ಜನರ ಖರೀದಿ ಶಕ್ತಿ ವೃದ್ಧಿಗೆ ಇಂಬು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ