ಹುಬ್ಬಳ್ಳಿ ಅಕ್ಟೋಬರ್ 26: ಬಿಜೆಪಿ, ಕಾಂಗ್ರೆಸ್ನವರು ಬಸ್ ಸ್ಟಾಂಡ್ ಬಸವೆಯರ ತರಹ ಆಗಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನವರೆಗೆ ಮಾನ ಮರ್ಯಾದೆ,ಜೈಲ್, ಬೇಲು ಇಲ್ಲದಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸ್ಥಾನ ಇಲ್ಲ ಮಾನ ಇದೆ ಆದರೆ ಬಿಜೆಪಿಯಲ್ಲಿ 12 ಜನರ ವಿಡಿಯೋ ಸಲುವಾಗಿ ಬೇಲ್ ತೆಗೆದುಕೊಂಡು ಕುಳಿತಿದ್ದಾರೆ. ಅದರಲ್ಲಿ ಏನು ಇದೆ ಅಂತ ನಾನು ನ್ಯಾಯಧೀಶರಿಗೆ ಹೇಳಬೇಕು ಎಂದುಕೊಂಡಿದ್ದೇನೆ ಎಂದರು.
ಕರ್ನಾಟಕದಲ್ಲಿ ಬರಿ ಇಂತಹದ್ದೇ ನಡೆಯುತ್ತಿದೆ..
ಇನ್ನು ಹಲವಾರು ನಾಯಕರು ಹಾಗೂ ಶಾಸಕರ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಬರಿ ಇಂತಹದ್ದೇ ನಡೆಯುತ್ತಿದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ವಿದ್ಯಾರಣ್ಯ ಪುರ ಶ್ರೀಗಳ ನಾಡು ಇದು. ಬಸವಾದಿ ಶರಣರು, ಕನಕದಾಸರು, ಸೂಫಿ ಸಂತರು ಕಟ್ಟಿದ ನಾಡಿದು. ಇಂತಹ ನಾಡಿನಲ್ಲಿ ಏನೆಲ್ಲಾ ನಡೆದಿದೆ. ಇನ್ನೂ ಏನೇನು ನೋಡಬೇಕು ಕೇಳಬೇಕು ಎಂದು ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.
1995 ಕಾಲದ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಬರುತ್ತದೆ
ಅಹಿಂದ್ ಸಂಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಜೊತೆಗೆ ಹೋಗುತ್ತಿದ್ದೇವೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಕಟ್ಟಿದ ಸಂಘ ಇದು. ಎಲ್ಲ ಸಮಾಜದವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. 1995 ಕಾಲದ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಬರುತ್ತದೆ. ಬಸವ ಕೃಪದಲ್ಲಿ ಬೆಳೆದರಿಗೆ ಕೇಶವಕೃಪ ಸರಿ ಇರಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಬಸವ ಕೃಪಕ್ಕೆ ಬರುತ್ತಾರೆ ಎಂದರು.
ಜಂಗರಮರ ಜೊತೆಗೆ ಜಗಳವಾಡಬೇಡಿ