ಅಕ್ಟೋಬರ್ 9ಕ್ಕೆ ರಾಜ್ಯಾಧ್ಯಂತ ಸರ್ಕಾರ ಆಯೋಜಿಸುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬಹಿμÁ್ಕರ ಹಾಕಲು ರಾಜ್ಯ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಗೋಕಾಕ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಕೊಡಲು ವಿಳಂಬ ಮಾಡುತ್ತಿದೆ. ಹೀಗಾಗಿ ರಾಜ್ಯಾದ್ಯಂತ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಬಹಿμÁ್ಕರ ಹಾಕಲಾಗಿದೆ. ಆದರೆ ಖಾಸಗಿ ಕಾರ್ಯಕ್ರಮಕ್ಕೆ ಯಾವುದೇ ನಿಬರ್ಂಧ ಇಲ್ಲ.
ಇನ್ನು ಪ್ರಸನ್ನನಾನಂದಪುರಿ ಸ್ವಾಮೀಜಿ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಹೋರಾಟಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. 2 ವರ್ಷಗಳಿಂದ ಹೋರಾಟ ನಡೆಸಿದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನಾನು ಸಚಿವನಾದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿ.ಶ್ರೀರಾಮುಲು ಹೇಳಿಕೆ ಬಗ್ಗೆ ಹೇಳಿ ಈಗಾಗಲೇ ಮುಗಿದು ಹೋಗಿದೆ. ಸಮಯವೂ ಮುಗಿದಿದೆ. ಅವರ ಅವಧಿ ಕೂಡ ಮುಗಿಯಲು ಬಂದಿದೆ. 24 ತಾಸು ಹೇಳಿದ್ದರೂ ಆದರೆ 24 ತಿಂಗಳು ಆಗುತ್ತಾ ಬಂದಿತು. ಅದು ಕೇವಲ ರಾಜಕೀಯ ಆಶ್ವಾಸನೆ ಮಾತ್ರ ಎಂದು ತಿರುಗೇಟು ಕೊಟ್ಟರು.