ಚಾಮರಾಜನಗರ: ನಮ್ಮ ಕೈಯನ್ನೇ ಈಗ ನಂಬಕ್ಕಾಗಲ್ಲ- ಯಾರು ಏನು-ಹೇಗೆ ಅಂತ ಗೊತ್ತಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೀವಭಯ ಇದ್ದಂತೆ ಮಾತನಾಡಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು.
ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಭಾರತ್ ಜೋಡೋ ಯಾತ್ರೆಯಫೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್, ನನಗೆ ಯಾರೂ ಮಾಲೆ ಹಾಕಬೇಡಿ; ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೆಲುವಿನ ಮಾಲೆ ಹಾಕಿ ಎಂದರು. ಮಾತು ಮುಂದುವರೆಸಿದ ಡಿಕೆಶಿ ರಾಜೀವ್ ಗಾಂಧಿ ಅವರನ್ನು ಯಾರು ಕೊಂದಿದ್ದು ಹಾರ ಹಾಕಲು ಬಂದವರು, ಇಂದಿರಾ ಗಾಂಧಿ ಅವರನ್ನು ಗನ್ ಮ್ಯಾನ್ ಗುಂಡಿಟ್ಟ ಆದ್ದರಿಂದ ಯಾರನ್ನು ನಾವು ನಂಬುವಂತಿಲ್ಲ- ನಮ್ಮ ಕೈಯನ್ನೆ ನಾವು ನಂಬುವಂತಿಲ್ಲ ಎಂದರು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುವವರೂ ಅಷ್ಟೇ ಮಾಲೆ ಎಲ್ಲಾ ತರಬೇಡಿ, ನನಗೂ ತರಬೇಡಿ, ಬಹಳ ಹುಷರಾಗಿರಬೇಕೆಂದು ಎಂದರು.