ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಡಬ್ಬಿ ಹಂಚುವ ಕೆಲಸ ಶುರುವಾಗಿದೆ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ನಾನು 10 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಶಾಸಕನಾಗಬೇಕು ಎಂಬ ಆಸೆಯಿದೆ. ಆ ಪ್ರಕಾರ ಏನು ಸಾಧ್ಯವಿದೆ ನಮ್ಮ ಕಾರ್ಯರ್ತರು, ಹಿರಿಯರ ಜೊತೆ ಸಂಪರ್ಕ, ಭೇಟಿ, ಮಾತುಕತೆ ಎಲ್ಲಾ ನಡಿತಿದೆ.
ಸಧ್ಯಕ್ಕೆ ಸಂಘಟನೆ ಮಾಡುತ್ತಿದ್ದೇನೆ, ಹೀಗಾಗಿ ಇದಕ್ಕೆ ಪ್ರಮುಖ ಆಧ್ಯತೆ ಕೊಟ್ಟಿದ್ದೇನೆ ಎಂದರು. ನಾನು ಮೂರು ಬಾರಿ ಚುನಾವಣೆ ಎದುರಿಸಿದ್ದೇನೆ. ನಾನು ಗೆದ್ದಾಗ ಬಂದಿದ್ದ ವೋಟ್ಗಿಂತ ಸೋತಾಗ 15 ಸಾವಿರ ವೋಟ್ ಹೆಚ್ಚಿಗೆ ಬಂದಿವೆ. ರಾಜಕೀಯ ವ್ಯವಸ್ಥೆಯಲ್ಲಿ ಏನು ಆಗಬೇಕು ಅದು ಆಗಲೇಬೇಕು. ಎಂಪಿ ಚುನಾವಣೆಯಲ್ಲಿ ನನಗೆ ಎಷ್ಟು ವೋಟ್ ಬಂದಿದ್ದವು ಅದಕ್ಕಿಂತ 2-3 ಸಾವಿರ ವೋಟ್ ಅಷ್ಟೇ ಕಡಿಮೆ ಬಂದಿವೆ. ಬಿಜೆಪಿ ಅಷ್ಟು ವೋಟ್ ಬ್ಯಾಂಕ್ ಇದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಬಾರಿಯಿಂದ ಇರುವ ಚುನಾವಣಾ ಪದ್ಧತಿ ಎಲ್ಲಿಯೂ ಇಲ್ಲ. ಈಗಲೇ ಡಬ್ಬಿ ಹಂಚುತ್ತಿದ್ದಾರೆ. ನೀವು ಒಳ್ಳೆಯ ಕೆಲಸ ಮಾಡಿದ್ರೆ ಡಬ್ಬಿ ಹಂಚುವ ಪ್ರಶ್ನೆಯೇ ಬರುವುದಿಲ್ಲ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ. ನಾವು ಮಾತ್ರ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತೇವೆ ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಟಾಂಗ್ ಕೊಟ್ಟರು.