Breaking News
Home / ರಾಜಕೀಯ / ಕಾಂಗ್ರೆಸ್​ ನಿದ್ದೆ ಮಾಡುವ ಸಿಂಹವನ್ನು ನಂಬಿದೆ, ನಮ್ಮದು ಘರ್ಜನಾ ರೂಪದ ಸಿಂಹ: ಸಿಎಂ ಬೊಮ್ಮಾಯಿ

ಕಾಂಗ್ರೆಸ್​ ನಿದ್ದೆ ಮಾಡುವ ಸಿಂಹವನ್ನು ನಂಬಿದೆ, ನಮ್ಮದು ಘರ್ಜನಾ ರೂಪದ ಸಿಂಹ: ಸಿಎಂ ಬೊಮ್ಮಾಯಿ

Spread the love

ಉಡುಪಿ: ಕಾಂಗ್ರೆಸ್​ನವರು ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿ ಇರಬೇಕಾಗಿರೊ ಸಿಂಹ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ, ನಾವು ನೋಡುವ ದೃಷ್ಟಿಯೇ ಬೇರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಹೊಸ ಸಂಸತ್​ ಭವನದ ಮೇಲೆ ಸ್ಥಾಪಿಸಿರುವ ರಾಷ್ಟ್ರ ಲಾಂಛನವನ್ನು ಸರ್ಕಾರ ಮಾರ್ಪಾಡು ಮಾಡಿದೆ. ಆ ಮೂಲಕ ರಾಷ್ಟ್ರ ಲಾಂಛನದ ಘನತೆಗೆ ಸರ್ಕಾರ ಅವಮಾನ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಮೂಲ ರಾಷ್ಟ್ರ ಲಾಂಛನದಲ್ಲಿರುವಂತೆ ಈ ಪ್ರತಿಮೆಯಲ್ಲಿ ಸಿಂಹಗಳ ಚಿತ್ರಣ ಇಲ್ಲ. ಹೊಸ ಸಂಸತ್​ ಭವನದ ಮೇಲೊಇನ ಲಾಂಛನದಲ್ಲಿ ಸಿಂಹಗಳು ಬಾಯ್ತೆರೆದು ಗರ್ಜಿಸುತ್ತಿವೆ. ನರಭಕ್ಷಣೆಯ ಉತ್ಸಾಹದಲ್ಲಿರುವಂತೆ ಕಾಣುತ್ತಿದೆ ಎಂದು ಟೀಕಿಸಿವೆ. ಈ ಕುರಿತು ಉಡುಪಿಯಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದವರು, ನಮ್ಮದು ಘರ್ಜನಾ ರೂಪದಲ್ಲಿರಬೇಕಾಗಿರೊ ಸಿಂಹ ಎಂದು ಟಾಂಗ್​ ಕೊಟ್ಟರು.

ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ. ನಾವು ನೋಡುವ ದೃಷ್ಟಿಯೇ ಬೇರೆ. ನಮ್ಮಲ್ಲಿ ಕ್ರಿಯಾಶೀಲವಾದ ಆಯಕ್ಟೀವ್​ ಪ್ರಧಾನಿ ಇದ್ದಾರೆ ಎಂದು ಕಾಂಗ್ರೆಸ್​ಗೆ ಸಿಎಂ ತಿರುಗೇಟು ನೀಡಿದರು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ