ಜೂನ್ 22 ರಂದು ಸಂಜೆ ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಹೀಗೆ ಖುಷಿ ಖುಷಿಯಾಗಿ ಹೋಗುತ್ತಿದ್ದ ಜೋಡಿಯನ್ನು ಕಾರ್ನಲ್ಲಿ ಬಂದ ತಂಡವೊಂದು ಅಡ್ಡಗಟ್ಟಿದೆ.ನಮ್ಮ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳು ಪಕ್ಕಾ ಸಿನಿಮಾ ಸ್ಟ್ರೈಲ್ನಲ್ಲಿರುತ್ತದೆ.
ಇಂತಹ ಘಟನೆಗಳನ್ನು ನೋಡಿ ಸಿನಿಮಾ ಕಥೆ ಸೃಷ್ಟಿಸುತ್ತಾರೋ, ಅಥವಾ ಸಿನಿಮಾ ನೋಡಿ ಇಂತಹ ಪ್ಲ್ಯಾನ್ ರೂಪಿಸುತ್ತಾರೋ ಗೊತ್ತಾಗುವುದಿಲ್ಲ. ಅಂತಹದೊಂದು ಘಟನೆ ಬಿಹಾರ ಮುಂಗೇರ್ನಲ್ಲಿ ನಡೆದಿದೆ. ಜೂನ್ 14 ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹ ನಡೆದಿತ್ತು. ಈ ಸಂಭ್ರಮ ಮೊದಲ ವಾರದವರೆಗೆ ಹಾಗೆಯೇ ಮುಂದುವರೆದಿತ್ತು. ನವದಂಪತಿಗಳು ಖುಷಿಯಿಂದಲೇ ಸಂಬಂಧಿಕರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಈ ಜೋಡಿಯನ್ನು ನೋಡಿ ಕಣ್ಣು ಬೀಳದಿರಲಿ ಎಂದವರೇ ಹೆಚ್ಚು. ಆದರೆ ಮದುವೆಯಾಗಿ ಒಂದೇ ವಾರದಲ್ಲಿ ಮೋನಿ ಕುಮಾರಿ ಮೇಲೆ ಕಣ್ಣು ಬಿದ್ದಾಗಿತ್ತು. ಆದರೆ ಈ ಕಣ್ಣು ಬಿದ್ದು 6 ವರ್ಷಗಳೇ ಕಳೆದಿತ್ತು ಎಂಬುದೇ ಇಲ್ಲಿ ಟ್ವಿಸ್ಟ್. ಅಂದರೆ…
ಜೂನ್ 22 ರಂದು ಸಂಜೆ ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಹೀಗೆ ಖುಷಿ ಖುಷಿಯಾಗಿ ಹೋಗುತ್ತಿದ್ದ ಜೋಡಿಯನ್ನು ಕಾರ್ನಲ್ಲಿ ಬಂದ ತಂಡವೊಂದು ಅಡ್ಡಗಟ್ಟಿದೆ. ಅಷ್ಟೇ ಅಲ್ಲದೆ ಗನ್ ತೋರಿಸಿ ವಿವೇಕ್ನನ್ನು ಬೆದರಿಸಿದ್ದಾರೆ. ಒಂದು ಕಡೆ ವಿವೇಕ್ನ್ನು ಗ್ಯಾಂಗ್ ವಶಕ್ಕೆ ತೆಗೆದುಕೊಂಡರೆ, ಮತ್ತೊಂದು ಕಡೆ ಮೋನಿ ಕುಮಾರಿಯನ್ನು ಕಾರ್ಗೆ ಹತ್ತಿಸಿದ್ದಾರೆ. ಏನಾಗುತ್ತಿದೆ ಅನ್ನುವಷ್ಟರಲ್ಲಿ ಮೋನಿ ಕುಮಾರಿಯೊಂದಿಗೆ ಗ್ಯಾಂಗ್ ಎಸ್ಕೇಪ್ ಆಗಿತ್ತು.
ಇತ್ತ ಏನು ಮಾಡಲಿ ಎಂದು ತೋಚದೆ ತಲೆ ಕೆಡಿಸಿಕೊಂಡ ವಿವೇಕ್ ನೇರವಾಗಿ ಮನೆಗೆ ಬಂದು ವಿಷಯ ಮುಟ್ಟಿಸಿದ್ದಾನೆ. ಅಷ್ಟೇ ಅಲ್ಲದೆ ಕುಟುಂಬದವರ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾಗಿ ಮನೆಗೆ ಬಂದು ನೋಡಿದರೆ ಮದುವೆಗೆ ಹಾಕಿದ್ದ ಒಡವೆಗಳು, ಆಭರಣಗಳೂ ಯಾವುದೂ ಇರಲಿಲ್ಲ. ಅಷ್ಟೇ ಅಲ್ಲದೆ ಮೋನಿ ಕುಮಾರಿಗೆ ಬೇಕಾದ ವಸ್ತುಗಳು ರೂಮ್ನಲ್ಲಿ ಕಾಣೆ.
ಒಡವೆ ಹಾಗೂ ಇನ್ನಿತರ ವಸ್ತುಗಳ ರೂಮ್ನಲ್ಲಿ ಇಲ್ಲದಿರುವುದು ನೋಡಿ ಇಡೀ ಘಟನೆಯ ಬಗ್ಗೆ ವಿವೇಕ್ಗೆ ಅನುಮಾನ ಬಂದಿದೆ. ಅಲ್ಲದೆ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಇದೇ ವೇಳೆ ಮೋನಿ ಕುಮಾರಿಯ ಫೋನ್ ಫೋನ್ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪಹರಣಗಾರರ ತಂಡದಲ್ಲಿದ್ದ ಒಬ್ಬನ ನಂಬರ್ನಿಂದ ಮೋನಿ ಕುಮಾರಿಗೆ ಪದೇ ಪದೇ ಕರೆ ಬಂದಿರುವುದು ಕಂಡು ಬಂದಿದೆ.