, ಬೆಂಗಳೂರು – ಬೆಳಗಾವಿ ಜಿಲ್ಲೆಯ ಕೆಲವರು ಸೇರಿದಂತೆ ಒಟ್ಟೂ 39 ತಹಸಿಲ್ದಾರರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಇವರಲ್ಲಿ ಮೂವರನ್ನು ಸಾರ್ವಜನಿಕರ ದೂರಿನ ಮೇರೆಗೆ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ.
ಗ್ರೇಡ್ 1 ಮತ್ತು ಗ್ರೇಡ್ 2 ತಹಸಿಲ್ದಾರರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆಗೊಳಿಸಿ ಶುಕ್ರವಾರ ಸರಕಾರ ಆದೇಶ ಹೊರಡಿಸಿದೆ.
ರಾಮದುರ್ಗ ತಹಸಿಲ್ದಾರ ರುಕ್ಮಿಣಿ ದಂಡೇಕರ್, ಕಲಬುರಗಿ ಜಿಲ್ಲೆ ಕಾಳಗಿ ತಹಸಿಲ್ದಾರ ರಾಜಕುಮಾರ ಜಾಧವ ಹಾಗೂ ರಾಯಚೂರು ಹಂಪಣ್ಣ ಸಜ್ಜನ್ ಅವರನ್ನು ಸಾರ್ವಜನಿಕ ದೂರಿನ ಮೇರೆಗೆ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಲಾಗಿದೆ.