ಕಳೆದ ಅನೇಕ ವರ್ಷಗಳಿಂದ ಕಾಗವಾಡ ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆ ಬರುವ ಏಪ್ರಿಲ್ ತಿಂಗಳದ ಕೊನೆವರೆಗೆ ಚಾಲನೆಗೊಳ್ಳಲಿದೆ ಎಂದು ಮಾಜಿ ಸಚಿವರು ಹಾಗೂ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಒಂದು ಕಾರ್ಯಕ್ರಮದಲ್ಲಿ ಇನ್ ನ್ಯೂಸ್ ವಾಹಿನಿಗೆ ಮಾಹಿತಿ ನೀಡುವಾಗ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಬರಡ ಭೂಮಿಗೆ ನೀರು ಹರಿಸಲಾಗುವುದು ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.
ಯೋಜನೆ ಕಾಮಗಾರಿ ಕೊರೋನಾ ಮಹಾಮಾರಿಯಿಂದ ಸ್ವಲ್ಪ ವಿಳಂಬವಾಗಿದೆ. ನಿರಾವರಿ ಯೋಜನೆ ಕಾಮಗಾರಿ ಕೈಗೊಂಡ ಕೆ.ಎನ್.ಎನ್ ಕಂಪನಿಗೆ ಆರ್ಥಿಕ ಕೊರತೆ ಇತ್ತು. ಇದನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಇಲಾಖೆಯ ಸಚಿವರಿಗೆ, ಅಧಿಕಾರಿಗಳ ಗಮನಕ್ಕೆ ತಂದಾಗ ಕೊರತೆಯಿದ್ದ 20 ಕೋಟಿ ರೂ. ನೀಡುವ ಬೇಡಿಕೆ ಮಾಡಿದ್ದೆ. ಆದರೂ ಕೆಲ ಹಿರಿಯ ಅಧಿಕಾರಿಗಳು ಗಮನಿಸುತ್ತಿರಲಿಲ್ಲ, ನಾನು ಅವರಿಗೆ ಭರವಸೆ ನೀಡಿ ಹಣದ ಜವಾಬ್ದಾರಿ ನಾನು ಹೊಂದುತ್ತೇನೆ. ಕಂಪನಿಯಿಂದ ಸರ್ಕಾರಕ್ಕೆ ಯಾವುದೇ ಮೋಸವಾಗುವುದಿಲ್ಲ ಎಂದು ಹೇಳಿ ಸಮಸ್ಯೆ ಬಂದರೆ ಈ ಹಣದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು