Breaking News
Home / ರಾಜಕೀಯ / ಅಸಮಾಧಾನದ ಹೊಳೆಯಲ್ಲಿ ಗೆಲುವಿಗೆ ಹೆಣಗಾಟ

ಅಸಮಾಧಾನದ ಹೊಳೆಯಲ್ಲಿ ಗೆಲುವಿಗೆ ಹೆಣಗಾಟ

Spread the love

ಬೆಳಗಾವಿ: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹತ್ತಾರು ಸಮಸ್ಯೆಗಳ ನಡುವೆ ಚುನಾವಣೆ ನಡೆಯುತ್ತಿರುವ ವಾಯ ವ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಾತಿ ಸಮೀಕರಣ ಮತ್ತು ಹಣದ ಪ್ರಭಾವದ ಮಾತು ಜೋರಾಗಿ ಕೇಳಿಬರುತ್ತಿದೆ. ಪಕ್ಷದೊಳಗಿನ ಮನಸ್ತಾಪ ಹಾಗೂ ಮತದಾರರಲ್ಲಿನ ಅಸಮಾಧಾನ ಕಣ ದಲ್ಲಿರುವ ಅಭ್ಯರ್ಥಿಗಳಿಗೆ ತಮ್ಮ ಪ್ರತಿಷ್ಠೆ ಯನ್ನೇ ಪಣಕ್ಕೊಡ್ಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ.

 

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಧ್ಯಾಸಾಧ್ಯತೆ ವಿಷಯಕ್ಕಿಂತ ಪಕ್ಷದೊಳಗಿನ ಅಸಮಾಧಾನವೇ ಹೆಚ್ಚು ಸುದ್ದಿಯಾಗುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡರಲ್ಲೂ ಇದೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳಲ್ಲಿ ಸಾಕಷ್ಟು ಆತಂಕ ಕಾಣುತ್ತಿದೆ. ರಾಷ್ಟ್ರೀಯ ಪಕ್ಷಗಳಲ್ಲಿನ ಈ ಅಸಮಾಧಾನದ ಲಾಭ ಪಡೆಯಲು ಮುಂದಾ ಗಿರುವ ಪಕ್ಷೇತರ ಅಭ್ಯರ್ಥಿ ಎನ್‌.ಬಿ.ಬನ್ನೂರ ಒಂದು ರೀತಿ ಯಲ್ಲಿ ಈ ಚುನಾವಣೆಯಲ್ಲಿ ಕಪ್ಪುಕುದುರೆಯಂತೆ ಕಾಣುತ್ತಿ ದ್ದಾರೆ. ಅನಿರೀಕ್ಷಿತ ಬೆಳವಣಿಗೆಗಳು ನಡೆದು ಬನ್ನೂರ ವಿಜಯದ ಮಾಲೆ ಧರಿಸಿದರೂ ಅಚ್ಚರಿ ಪಡಬೇಕಿಲ್ಲ.

ಆದರೆ ಬಿಜೆಪಿ ಅಭ್ಯರ್ಥಿ ಅರುಣ ಶಹಾ  ಪುರ ಮತ್ತು ಕಾಂಗ್ರೆ  ಸ್‌ನ ಪ್ರಕಾಶ ಹುಕ್ಕೇರಿ ಅವ ರನ್ನು ಹಗುರವಾಗಿ ಪರಿಗಣಿಸು   ವಂತಿಲ್ಲ. ರಾಜಕೀಯವಾಗಿ ಇಬ್ಬರೂ ಅನುಭವಸ್ಥರು. ರಾಜ  ಕೀಯ ತಂತ್ರಗಾರಿಕೆ ಬಲ್ಲವರು. ಯಾವ ಸಮಯದಲ್ಲಿ ಯಾವ ಎಲೆ ಹಾಕಬೇಕು ಎಂಬುದನ್ನು ಕರಗತ ಮಾಡಿಕೊಂಡವರು.

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,388 ಮತ  ದಾರ ರಿದ್ದಾರೆ. ಇದರಲ್ಲಿ ಪ್ರತಿಶತ 50ಕ್ಕೂ ಹೆಚ್ಚು ಮತದಾರರನ್ನು ಹೊಂದಿ ರುವ ಬೆಳಗಾವಿ ನಿರ್ಣಾಯಕ ಸ್ಥಾನದ    ಲ್ಲಿದೆ. ಕಾಂಗ್ರೆಸ್‌-ಬಿಜೆಪಿ ಹೊರತುಪಡಿಸಿ ಜೆಡಿ  ಎಸ್‌ನಿಂದ ಚಂದ್ರಶೇಖರ ಲೋಣಿ ಹಾಗೂ 9 ಜನ ಪಕ್ಷೇತರರು ಕಣದಲ್ಲಿದ್ದಾರೆ.

ಶಹಾಪುರಗೆ ಅಸಮಾಧಾನದ ಸವಾಲು
ಕಳೆದೆರಡು ಚುನಾವಣೆಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಗೆದ್ದಿದ್ದ ಬಿಜೆಪಿಯ ಅರುಣ ಶಹಾಪುರಗೆ ಈ ಬಾರಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗಿವೆ.

ಮುಖ್ಯವಾಗಿ ಅಸಮಾಧಾನ ಪಕ್ಷದೊಳಗೆ ಹಾಗೂ ಹೊರಗಡೆ ತೀವ್ರವಾಗಿರುವುದು ಅವರಿಗೆ ಸಂಕಷ್ಟ ತಂದಿಟ್ಟಿದೆ. ಇದು ಬೆಳಗಾವಿ, ವಿಜಯಪುರ, ಬಾಗಲಕೋಟೆ ಮೂರೂ ಜಿಲ್ಲೆಗಳಲ್ಲೂ ಕಾಣಿಸಿಕೊಂಡಿರುವುದು ಗಮನಿಸಬೇಕಾದ ಅಂಶ.

ಇನ್ನೊಂದು ಕಡೆ ಕೆಲವು ಶಿಕ್ಷಕರ ಸಂಘಟನೆಗಳು ಒಂದಾಗಿ ಶಹಾಪುರ ವಿರುದ್ಧ ಪ್ರಚಾರ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಪಕ್ಷದ ಜತೆಗೆ ಶಿಕ್ಷಕ ಸಮುದಾಯದಲ್ಲಿ ಅರುಣ ಶಹಾಪುರ ಬಗ್ಗೆ ಮೊದಲಿದ್ದ ಅಭಿಪ್ರಾಯ ಬದಲಾಗಿದೆ. ಅತ್ಯಂತ ಕಷ್ಟದ ಸಮಯದಲ್ಲಿ ನೆರವಿಗೆ ಬರಲಿಲ್ಲ. ಕೊರೊನಾ ಸಮಯದಲ್ಲಿ ಸಾಕಷ್ಟು ಶಿಕ್ಷಕರು ಕೆಲಸ ಕಳೆದುಕೊಂಡರು. ಅವರಿಗೆ ಮರಳಿ ಕೆಲಸ ಕೊಡಿಸಲು ಮುಂದಾಗಲಿಲ್ಲ. ಬಡ್ತಿ ಮತ್ತು ವೇತನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಿಲ್ಲ ಎಂಬ ನೋವು ಶಿಕ್ಷಕರಲ್ಲಿದೆ.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಶಹಾಪುರ ಹೊರಗಿನವರು ಎಂಬ ಭಾವನೆ ಇದ್ದರೆ ವಿಜಯಪುರ ಜಿಲ್ಲೆಯಲ್ಲಿ ನಮ್ಮವರಿದ್ದರೂ ಏನೂ ಮಾಡಲಿಲ್ಲ ಎಂಬ ಬೇಸರ ಇದೆ. ಈ ಎಲ್ಲ ಅಂಶಗಳು ಶಹಾಪುರಗೆ ಮುಳುವಾಗುವ ಸಾಧ್ಯತೆಗಳಿವೆ.

ಹುಕ್ಕೇರಿಗೆ ಹಿರಿಯರ ವಿಶ್ವಾಸ
ಇದುವರೆಗೆ ವಿಧಾನಸಭೆಯಿಂದ ಶಾಸಕರಾಗಿ, ನಂತರ ಸಂಸದರಾಗಿ ಒಳ್ಳೆಯ ಹೆಸರು ಮಾಡಿರುವ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಈಗ ವಿಧಾನ ಪರಿಷತ್‌ ಮೂಲಕ ಮತ್ತೂಂದು ರಾಜಕೀಯ ಇನಿಂಗ್ಸ್‌ಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ ಬಗ್ಗೆ ಬೇರೆ ಅಭಿಪ್ರಾಯ ಇಲ್ಲ. ಆದರೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದವರು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲದವರು ಸ್ಪರ್ಧಿಸುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬಂದಿವೆ. ಪ್ರಕಾಶ ಹುಕ್ಕೇರಿಗೆ ಇದೊಂದೇ ಸಮಸ್ಯೆ.

ಹುಕ್ಕೇರಿ ಶಿಕ್ಷಕರ ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಕಾಂಗ್ರೆಸ್‌ನ ಹಿರಿಯ ನಾಯಕರು ಇವರ ಬೆಂಬಲಕ್ಕೆ ನಿಂತಿದ್ದಾರೆ. ವಿಜಯಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಹುಕ್ಕೇರಿಗೆ ಆನೆಬಲ ಬಂದಂತಾಗಿದೆ. ಬಾಗಲಕೋಟೆಯ ಹಳೆಯ ಕಾಂಗ್ರೆಸ್‌ ನಾಯಕರು ಸಹ ಹುಕ್ಕೇರಿ ಪರ ನಿಂತಿದ್ದಾರೆ. ಇದರ ಜತೆ ತೆರೆಮರೆಯಲ್ಲಿ ನಡೆದಿರುವ ಹೊಂದಾಣಿಕೆ ರಾಜಕಾರಣ ಹುಕ್ಕೇರಿ ಮುಖದಲ್ಲಿ ಸ್ವಲ್ಪ ಗೆಲುವಿನ ನಗು ಮೂಡಿಸಿದೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ