ಖಾನಾಪೂರದಿಂದ ಹಳಿಯಾಳ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಹೊಗಲು ಬಸ್ ಇಲ್ಲದೇ ಪರದಾಡುತ್ತಿದ್ದ ಸಾರ್ವಜನಿಕರ ಸಂಕಷ್ಟ ಕಂಡ ಶಾಸಕಿ ಅಂಜಲಿ ನಿಂಬಾಳ್ಕರ್ ಡಿಪೋ ಮ್ಯಾನೇಜರ್ಗೆ ಸ್ಥಳದಲ್ಲೇ ಕರಿಸಿ ಬಸ್ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಹೌದು ಖಾನಾಪೂರದಿಂದ ಕಾರ್ಯಕ್ರಮ ನಿಮಿತ್ಯ ಹೊರಟಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ರುಮೇವಾಡಿ ಕ್ರಾಸ್ ಬಳಿ ಬಹು ಸಂಖ್ಯೆಯಲ್ಲಿ ಸಾರ್ವಜನಿಕರು ನಿಂತಿರುವುದನ್ನು ಗಮನಿಸಿ ಕಾರು ನಿಲ್ಲಿಸಿ ಜನರ ಬಳಿ ಹೋಗಿ ವಿಚಾರಿಸಿದ್ದಾರೆ. ಆಗ ಸಾರ್ವಜನಿಕರು ಬಸ್ನ ಸಮಸ್ಯೆಯನ್ನು ಅಂಜಲಿ ನಿಂಬಾಳ್ಕರ್ ಬಳಿ ಹೇಳಿಕೊಂಡಿದ್ದಾರೆ. ತಕ್ಷಣವೇ ಡಿಪೋ ಮ್ಯಾನೇಜರ್ರನ್ನು ಸ್ಥಳಕ್ಕೆ ಕರೆಯಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದರು. ಬಸ್ ಬರುವವರೆಗೂ ಸಾರ್ವಜನಿಕರ ಸಂಕಷ್ಟ ಆಲಿಸಿದರು. ನಂತರ ಬಸ್ ಬಂದ ನಂತರ ಸಾರ್ವಜನಿಕರನ್ನು ಬಸ್ನಲ್ಲಿ ಹತ್ತಿಸಿ ಟಾಟಾ ಮಾಡಿ ಕಳಿಸಿದರು. ಈ ವೇಳೆ ಸಾರ್ವಜನಿಕರು ಕೂಡ ಅಂಜಲಿ ನಿಂಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.