Breaking News
Home / ರಾಜಕೀಯ / ಸಿದ್ದುಗೆ ರಾಜೀವ್ ಎಚ್ಚರಿಕೆ

ಸಿದ್ದುಗೆ ರಾಜೀವ್ ಎಚ್ಚರಿಕೆ

Spread the love

ಬೆಂಗಳೂರು,- ಅಧಿಕಾರದಲ್ಲಿದ್ದಾಗ ವೀರಶೈವ- ಲಿಂಗಾಯತ ಎಂದು ಸಮಾಜ ಒಡೆಯೋಕೆ ಹೋಗಿ ಕೈಸುಟ್ಟು ಕೊಂಡಿದ್ದೀರಾ. ಈಗ ಆರ್ಯ- ದ್ರಾವಿಡ ಎಂದು ಒಡೆದು ಮತ್ತೊಮ್ಮೆ ಕೈಸುಟ್ಟುಕೊಳ್ಳುತ್ತಿದ್ದಿರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಡುಚಿ ಶಾಸಕ ಪಿ.ರಾಜೀವ್ ತಿರುಗೇಟು ನೀಡಿದ್ದಾರೆ.

ಆರ್ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ವರು ಭಾರತೀಯರಲ್ಲ ಎಂದು ಹೇಳಿ ಸಿದ್ದರಾಮಯ್ಯ  ಆರ್‌ಎಸ್‌ಎಸ್‌ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಭಾವನೆಗೆ ನೋವು ತಂದಿದ್ದಾರೆ.

ಅಂಬೇಡ್ಕರ್ರವರ ¿ಹೂ ಈಸ್ ಶೂದ್ರ¿ ಅನ್ನೋ ಪುಸ್ತಕದಲ್ಲಿ ಆರ್ಯ-ದ್ರಾವಿಡ ಎಂದು ಬರೆದಿಲ್ಲ. ಆರ್ಎಸ್ಎಸ್ ಶಾಖೆಯಲ್ಲಿ ಜಾತೀಯತೆ ಇಲ್ಲ. ಸಿದ್ದರಾಮಯ್ಯನವರು ಸತ್ಯ ತಿಳಿದುಕೊಳ್ಳಲು ಆರ್‌ಎಸ್‌ಎಸ್‌ ಶಾಖೆಗೆ ಹೋಗಬೇಕು ಎಂದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿ ವ್ಯಾಮೋಹದಿಂದ ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ