ಸಿದ್ದು-ಡಿಕೆಎಸ್ ಬಣ ರಾಜಕೀಯ ಅಂತ್ಯವಾಗುತ್ತಾ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ ದೆಹಲಿಯಲ್ಲಿ ನಡೆದ ಪ್ಯಾಚಪ್ ಮೀಟಿಂಗ್. ರಾಹುಲ್ ಗಾಂಧಿ ನೇತೃತ್ವದ ಸಭೆಯಲ್ಲಿ ಒಗ್ಗಟ್ಟಿನ ಮಂತ್ರದ್ದೇ ಜಪ. ಮುಂದಿನ ಚುನಾವಣೆಗೆ ಹೋಗೋ ಮುನ್ನ ಎಲ್ಲಾ ಮುನಿಸು ಬದಿಗಿಡಿ ಅಂತಾ ರಾಹುಲ್ ಕಿವಿ ಮಾತು ಹೇಳಿದ್ದಾರೆ.
2023ರ ಚುನಾವಣೆಗೆ ದೆಹಲಿ ಮೀಟಿಂಗ್ನಲ್ಲಿ ‘ಕೈ’ ತಂತ್ರ
2023ರ ಚುನಾವಣೆಗೆ ಕೈ ಪಾಳಯ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷವನ್ನ ಬಲಗೊಳಿಸುವುದರ ಜೊತೆಗೆ ಪಕ್ಷದಲ್ಲಿನ ಕೆಲ ಗೊಂದಲಗಳನ್ನ ಬಗೆಹರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟಿನ ಮಂತ್ರವನ್ನ ಜಪಿಸಿದ್ದಾರೆ.