ಬೆಳಗಾವಿಯ ಸ್ವಾಮಿ ವಿವೇಕಾನಂದ ಟ್ರಸ್ಟ ವತಿಯಿಂದ ವಿವೇಕಾನಂದರ 160ನೇ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸ್ವಾಮಿ ವಿವೇಕಾನಂದ ಇನ್ಸಿಟಿಟ್ಯೂಟ್ ಆಫ್ ಕಾಮರ್ಸ ಆಂಡ್ ಕಂಪ್ಯೂಟರ್ ಏಜುಕೇಶನ್ ವತಿಯಿಂದ 160ನೇ ವಿವೇಕಾನಂದ ಜಯಂತಿ ನಿಮಿತ್ಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬುಧವಾರ ಬಹುಮಾತ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಅನಿಲ್ ಬೆನಕೆ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ.ಮಾಧವಪ್ರಭು, ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ನಂದೇಶ್ವರ ಹುಬ್ಬಳ್ಳಿ, ಪ್ರೊ.ನಿಜಲಿಂಗಪ್ಪ ಮದನಭಾವಿ, ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ, ವಿನಾಯಕ ಮೋರೆ, ಚಂದ್ರಶೇಖರ್ ಹೂಗಾರ್, ನಾಗಲಿಂಗ ಬೆಣಚಿನಮರಡಿ, ಕಿಶನ್ ತೋರಾಟ, ಆರ್.ಎಸ್.ಗಾಂವಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ವೇಳೆ ಎಲ್ಲ ಗಣ್ಯಮಾನ್ಯರು ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.