ಚಿಕ್ಕೋಡಿ ಬ್ರೇಕಿಂಗ್
ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ವಾಪಸ್ ಪಡೆದ ಹಿನ್ನೆಲೆ,
ಗೋಕಾಕದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ,
ಇದೊಂದು ಆಶ್ಚರ್ಯಕರ ಬೆಳವಣಿಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಸತೀಶ್,
ದೆಹಲಿ, ಪಂಜಾಬ್,ಹಾಗೂ ಉತ್ತರ ಪ್ರದೇಶದಲ್ಲಿ ರೈತರು ನಿರಂತರ ಹೋರಾಟ ಮಾಡುತ್ತಿದ್ದರು,
ಸತತ ಒಂದು ವರ್ಷದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದ ಸತೀಶ್,
ಕಾಯಿದೆ ಹಿಂಪಡೆದಿದ್ದಕ್ಕೆ ಬಿಜೆಪಿಯನ್ನು ಅಭಿನಂದಿಸೋಕೆ ಆಗಲ್ಲ,
ಬಳಹ ಹಿಂದೆಯೇ ಪ್ರಾಥಮಿಕ ದಿನಗಳಲ್ಲಿಯೇ ಈ ರೀತಿಯ ನಿರ್ಣಯ ಸರ್ಕಾರ ಮಾಡಬೇಕಾಗಿತ್ತು,
ಆದರೆ ತಡವಾಗಿ ನಿರ್ಧಾರ ಮಾಡಿದ್ದಾರೆ ಇದು ರೈತರು ಮತ್ತು ಜನಸಮಾನ್ಯರ ಗೆಲುವು ಎಂದ ಸತೀಶ್ ಜಾರಕಿಹೊಳಿ,
ಗೋಕಾಕದ ಹಿಲ್ ಗಾರ್ಡನ್ ನಲ್ಲಿ ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಹೇಳಿಕೆ,