ಗದಗ: ಅವರದ್ದು ಕಿತ್ತು ತಿನ್ನುವ ಬಡತನ, ಮಗಳು ಚೆನ್ನಾಗಿ ಇರಲಿ ಎಂದು ಸ್ಥಿತಿವಂತ ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ಬಡತನ ಇದ್ರೂ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ರು. ಮಗಳು ಚನ್ನಾಗಿಯೇ ಇದ್ದಾಳೆ ಅಂತಾ ಪೋಷಕರು ಅಂದುಕೊಂಡಿದರು. ಅಷ್ಟೇ ಅಲ್ಲ ನಾಲ್ಕು ತಿಂಗಳ ಗರ್ಭಿಣಿಯಾಗಿದ್ಲು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು. ಮುದ್ದಾದ ಮಗಳು ಈವಾಗ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಗಳ ಸಾವು ಈಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು..
ಕಳೆದ ಐದು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಕೂಡಾ ಮಾಡಲಾಗಿತ್ತು
ಹೌದು.. ಅವಳು ರೂಪವತಿ, ನೋಡಲು ಬಹಳ ಚೆನ್ನಾಗಿಯೇ ಇದ್ದಳು. ಮದ್ದಾದ ಮಗಳು ಚೆನ್ನಾಗಿ ಇರಲಿ ಎಂದು ಕೋಟ್ಯಾದಿಪತಿಗಳ ಮನೆಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ರು. ಕಳೆದ ಐದು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಕೂಡಾ ಮಾಡಲಾಗಿತ್ತು. ಆದ್ರೆ ಈಗ ನಿರ್ಮಲ ಶವವಾಗಿದ್ದಾಳೆ. ಅಂದಹಾಗೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಕಡ್ಡಿ ಪ್ಲಾಟ್ ನಿವಾಸಿಯಾದ ಲೋಕೇಶ್ ರಾಠೋಡ್ ಜೊತೆಗೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಚಿಕ್ಕಕೊಡಲಗಿ ತಾಂಡಾ ನಿವಾಸಿಯಾದ ನಿರ್ಮಲಾಳನ್ನು ಮದುವೆ ಮಾಡಿಕೊಡಲಾಗಿತ್ತು. ಅಳಿಯ ಲೋಕೇಶ್ ರಾಠೋಡ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದು, ಮಗಳು ಚನ್ನಾಗಿ ಇರಲಿ ಎಂದು ಲೋಕೇಶನ ಜೊತೆಗೆ ಮದುವೆ ಮಾಡಲಾಗಿತ್ತು.
ಇನ್ನೇನು ಸೀಮಂತ ಕಾರ್ಯವನ್ನು ಮಾಡಬೇಕು ಅಂತ ಸಂತಸದಲ್ಲಿ ನಿರ್ಮಲ ಮನೆಯ ಕುಟುಂಬಸ್ಥರು ತಯಾರಿಯಲ್ಲಿದ್ರು. ಆದ್ರೆ ನಿರ್ಮಲ ಈಗ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೀಗಾಗಿ ಕುಟುಂಬಸ್ಥರಿಗೆ ಬರ ಸಿಡಿಲು ಬಡದಂತಾಗಿದೆ. ಚೆನ್ನಾಗಿಯೇ ಇದ್ದ ನಿರ್ಮಲ ಏಕಾಏಕಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಅವಳ ಶವ ಪತ್ತೆಯಾಗಿದೆ. ಹೀಗಾಗಿ ಅವಳ ಸಾವಿಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ನೇಣು ಹಾಕಿಕೊಂಡ ರೂಂ ನೋಡಿದ್ರೆ ಸಾಕಷ್ಟು ಅನುಮಾನ ಕಾಡುತ್ತಿವೆ
ಶಿಕ್ಷಕ ವೃತ್ತಿ ಮಾಡುತ್ತಿರುವ ಲೋಕೇಶ್ ಹಾಗೂ ನಿರ್ಮಲ ಮೊದಲು ಚೆನ್ನಾಗಿ ಇದ್ದರು. ಆದರೆ ಕೆಲವು ದಿನಗಳಿಂದ ಗಂಡ ಹೆಂಡತಿ ನಡುವೆ ಬಿರುಕು ಉಂಟಾಗಿತ್ತಂತೆ. ಆಗಾಗ ಜಗಳ ಮಾಡುತ್ತಿರುವ ವಿಷಯವನ್ನು ಸ್ವತಃ ನಿರ್ಮಲ ಅವಳ ಸಹೋದರನ್ನ ಮುಂದೆ ಹೇಳಿಕೊಂಡಿದ್ದಳಂತೆ. ಮನೆಯಲ್ಲಿ ನೇಣು ಹಾಕಿಕೊಂಡ ರೂಂ ನೋಡಿದ್ರೆ ಸಾಕಷ್ಟು ಅನುಮಾನ ಕಾಡುತ್ತಿವೆ. ಕೊಲೆ ಮಾಡಿ ನೇಣು ಹಾಕಿದ್ದಾರಾ ಅನ್ನೋ ಗುಸುಗುಸು ಸೇರಿದ ಜನ್ರಲ್ಲಿ ಕೇಳಿ ಬರ್ತಾಯಿತ್ತು. ಆದರೆ ನಾಲ್ಕು ತಿಂಗಳ ಗರ್ಭಿಣಿ ನಿರ್ಮಲ ಏಕಾಏಕಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮದುವೆ ಸಮಯದಲ್ಲಿ ವರದಕ್ಷಿಣೆ ನೀಡಿ ಅದ್ದೂರಿಯಾಗಿ ಮದುವೆ ಮಾಡಲಾಗಿತ್ತು. ಮುಂದೆ ಏನಾಯಿತು ಎನ್ನುವುದು ಮೃತ ನಿರ್ಮಲ ಕುಟುಂಬಸ್ಥರಿಗೂ ಅರ್ಥವಾಗುತ್ತಿಲ್ಲ. ಕಾಲ್ ಮಾಡಿ ಮಾತನಾಡಿದಾಗ ಅಳಿಯ, ಮಗಳು ಚನ್ನಾಗಿ ಇದ್ದೇವೆ ಎಂದು ನಿರ್ಮಲ ಹೇಳ್ತಾಯಿದ್ದಳಂತೆ. ಆದರೆ ಈಗ ನೇಣು ಹಾಕಿಕೊಂಡಿರುವುದು ನಮಗೂ ಕಾರಣ ತಿಳಿಯುತ್ತಿಲ್ಲಾ ಎಂದು ಮೃತಳ ತಾಯಿ ಹೇಳ್ತಾರೆ.
ಗಜೇಂದ್ರಗಡ ಪೊಲೀಸರು ಹಾಗೂ ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಆಗಿದ್ದಾಗಿ ಹೋಯಿತು ಅಂತ ರಾಜಿ ಪಂಚಾಯತಿ ಮಾಡಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎನ್ನಲಾಗಿದೆ. ಗಜೇಂದ್ರಗಡ ಪೊಲೀಸ್ರು ಕೂಡ ದೂರು ಕೊಟ್ರೆ ತೋಗೋತೀವಿ ಅಂತ ಹೇಳ್ತಿದ್ದಾರಂತೆ. ಪೊಲೀಸರ ತನಿಖೆಯಿಂದಲೇ ಸೌಂದರ್ಯವಂತೆ ಸಾವಿನ ರಹಸ್ಯ ಬಯಲಾಗಬೇಕಾಗಿದೆ.