ಮಂಡ್ಯ: ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೂ ಮುನ್ನ ಸುರಕ್ಷತೆ ವಹಿಸದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿರುವ ಘಟನೆ ವರದಿಯಾಗಿದೆ. ಬರಿಗೈನಿಂದಲೇ ಪೌರ ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸಿರುವ ಅಮಾನವೀಯ ದೃಶ್ಯ ಕಂಡುಬಂದಿದೆ.
ಮೊನ್ನೆ ನಡೆದ ಪೌರ ಕಾರ್ಮಿಕರ ದಿನಾಚರಣೆ ದಿನವೇ ಕಾರ್ಮಿಕರಿಗೆ ಅಗೌರವ ಸೂಚಿಸಿಲಾಗಿದೆ. ಗ್ಲೌಸ್, ಗಮ್ ಬೂಟ್ ಇಲ್ಲದೇ ಪೌರ ಕಾರ್ಮಿಕರು ಚರಂಡಿ ಸ್ವಚ್ಛ ಮಾಡಿದ್ದಾರೆ. ಪಿಡಿಓ ಅಧಿಕಾರಿ ಗ್ಲೌಸ್, ಬೂಟ್ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಸುರಕ್ಷತಾ ಕ್ರಮವಹಿಸಿ ಕಾರ್ಮಿಕರು ಕೆಲಸ ಮಾಡಬೇಕಂಬ ನಿಯಮವಿದ್ದರೂ ನಿರ್ಲಕ್ಷ್ಯ ತೋರಿದ ಬೇಲೂರು ಪಂಚಾಯತಿ ಪಿಡಿಓ ಸುರೇಶ್ ಅಮಾನವೀಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಬೇಜವಾಬ್ದಾರಿ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹತ್ತಾರು ಮಂದಿ ಪೌರ ಕಾರ್ಮಿಕರು ಪೌರ ಕಾರ್ಮಿಕರ ದಿನಾಚರಣೆ ದಿನವೇ ಬೇಲೂರು ಗ್ರಾಮದಲ್ಲಿ ಬರಿಗೈಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.