ಕಾಂಗ್ರೆಸ್ ರಿವರ್ಸ್ ಆಪರೇಷನ್ ವಿಚಾರ ಸದ್ಯ BJP ನಾಯಕರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಕಸರತ್ತು ಆರಂಭಿಸಿದೆ ಎನ್ನಲಾಗಿದೆ.
ನೆನ್ನೆ ದಾವಣಗೆರೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ, ಪ್ರಮುಖ ರಾಜ್ಯ ನಾಯಕರು ಭಾಗಿಯಾಗಿದ್ದರು. ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಹಸ್ತ ಸಿದ್ದತೆ ವಿಚಾರ ಸದ್ದು ಮಾಡಿದೆ. ಅಷ್ಟಕ್ಕೂ ರಾಜ್ಯ ಬಿಜೆಪಿ ನಾಯಕರಿಗೇಕೆ ರಿವರ್ಸ್ ಆಪರೇಷನ್ ಭೀತಿ ಅನ್ನೋದನ್ನ ನೋಡೋದಾದ್ರೆ..
- ಆಡಳಿತ ಪಕ್ಷದ ಶಾಸಕರು ಪಕ್ಷಾಂತರ ಮಾಡಿದ್ರೆ ಸಾವ್ರರ್ತಿಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ
- ಆಡಳಿತ ವಿರೋಧಿ ಅಲೆ ಪ್ರತಿ ಪಕ್ಷ ಗಳಿಗೆ ಅಸ್ತ್ರವಾಗಲಿದೆ
- BJP ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅಪವಾದ
- ಯಡಿಯೂರಪ್ಪ ಹಾಗೂ ಬೊಮ್ಮಾಯಿ ನಾಯಕತ್ವದ ಮೇಲೆ ಅಪನಂಬಿಕೆಯ ಛಾಯೆ
- ಪಕ್ಷಾಂತರ ಮಾಡಿದ್ರೆ ಯಡಿಯೂರಪ್ಪ ನಾಯಕತ್ವದಲ್ಲಿನ ಅಸಮರ್ಥತೆ ಸಾಬೀತು
- 130-140 ಸ್ಥಾನ ಗಳಿಸುವ BJP ಟಾರ್ಗೆಟ್ ಪ್ರಬಲ ಹೊಡೆತ
- ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ರೆ, ಸಹಕಾರಿ ಆಗಲಿರುವ BJP ಶಾಸಕರು
- ಬಹುಮತ ಗಳಿಸಲು ಪ್ರತಿ ಕ್ಷೇತ್ರ, ಪ್ರತಿ ಶಾಸಕರೂ ಪ್ರಮುಖ ಪಾತ್ರ ವಹಿಸಲಿದ್ದಾರೆ
- ಯಾವ ಶಾಸಕರೂ ಪಕ್ಷ ಬಿಡದಂತೆ, ಈಗಿನಿಂದಲೇ ಎಚ್ಚರ ವಹಿಸಿದ ಕಾಂಗ್ರೆಸ್ ನಾಯಕರು
- ಹಾಗಾಗಿ ಕೋರ್ ಕಮಿಟಿ ಸಭೆಯಲ್ಲಿ ಕಾಂಗ್ರೆಸ್ ರಿವರ್ಸ್ ಆಪರೇಷನ್ ಚರ್ಚೆ ಆಗಿದೆ ಎನ್ನಲಾಗಿದೆ.