ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಪಡೆ ಗುರುವಾರ ಅರಣ್ಯಭವನದಿಂದ ಅರಮನೆ ಪ್ರವೇಶಿಸಿದ್ದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಅರಣ್ಯಭವನದಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳನ್ನು ಸಿಂಗರಿಸಿ ಗಜಪಡೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು.
ಅರಮನೆಯ ಜಯಮಾರ್ತಂಡ ದ್ವಾರದಲ್ಲಿ ಗಜಪಡೆಗೆ ಹೂಮಳೆಗರೆಯಲಾಯಿತು. ಸಚಿವ ಎಸ್.ಟಿ.ಸೋಮಶೇಖರ್ ಅವರು ಪೂಜೆ ನೆರವೇರಿಸಿ ಸ್ವಾಗತ ಕೋರಿದರು. ಇದೇ ವೇಳೆ ಕಬ್ಬು, ಬೆಲ್ಲ, ತೆಂಗಿನಕಾಯಿಯನ್ನು ಆನೆಗಳಿಗೆ ನೀಡಲಾಯಿತು.