Breaking News
Home / ರಾಜಕೀಯ / ವಿಜಯಪುರ ಜಿಲ್ಲೆಯಾದ್ಯಂತ ವರುಣನ ಆರ್ಭಟ

ವಿಜಯಪುರ ಜಿಲ್ಲೆಯಾದ್ಯಂತ ವರುಣನ ಆರ್ಭಟ

Spread the love

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರೀ ಮಳೆ ಸುರಿಯತೊಡಗಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ಎಡಬಿಡದೆ ಸುರಿಯತೊಡಗಿದ್ದು, ಇಡೀ ಜಿಲ್ಲೆ ಮಳೆನಾಡಿನಂತಾಗಿದೆ.

ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ತಿಕೋಟಾ, ಬಬಲೇಶ್ವರ, ಹೊರ್ತಿ, ಕೊಲ್ಹಾರ, ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗತೊಡಗಿದೆ.

ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಭಾರೀ ಮಳೆಯಿಂದ ಸಹಜ ಜನ ಜೀವನಕ್ಕೆ ಅಡಚಣೆಯಾಯಿತು.

ಜಿಲ್ಲೆಯಲ್ಲಿ ಇನ್ನೂ ಎರಡರಿಂದ ಮೂರು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ವಿವರ:

ಅಗರಖೇಡದಲ್ಲಿ ಅತೀ ಹೆಚ್ಚು ಅಂದರೆ, 6.5 ಸೆಂ.ಮೀ. ಮಳೆಯಾಗಿದೆ. ಹಲಸಂಗಿ 5.6, ಕನ್ನೂರ 5, ರಾಮನಹಳ್ಳಿ 4.8, ಮಮದಾಪೂರ 4.1, ದೇವರಹಿಪ್ಪರಗಿ 4.7,ಹೋರ್ತಿ 3.8, ಭೂತನಾಳ 3.8, ಇಂಡಿ 3.8, ವಿಜಯಪುರ 2.7, ಬಸವನ ಬಾಗೇವಾಡಿ 1.6, ಮನಗೂಳಿ 3.2, ಹೂವಿನ ಹಿಪ್ಪರಗಿ 1.2, ಮಟ್ಟಿಹಾಳ 1.7, ಹಿಟ್ನಳ್ಳಿ 2.1, ತಿಕೋಟಾ 2.2, ಕುಮಟಗಿ 2.1, ಬಬಲೇಶ್ವರ 1.6, ನಾದ ಬಿ.ಕೆ. 2.4, ಚಡಚಣ 1.8, ಝಳಕಿ 1.6, ಸಿಂದಗಿ 2.6, ಆಲಮೇಲ 2.1, ಸಾಸಾಬಾಳ 1, ಕಡ್ಲೆವಾಡ 3 ಸೆಂ.ಮೀ.ಮಳೆಯಾಗಿದೆ.


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ