ಬೆಳಗಾವಿ – ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ಬೆಳಗಾವಿಯಲ್ಲಿ ಅಪಾರ ಪ್ರಮಾಣದಲ್ಲಿ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅಬಕಾರಿ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ಸೇರಿ ಮಜಗಾಂವ ಕ್ರಾಸ್ ಹತ್ತಿರ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಹುಂಡೈ ಐ-೨೦ ಕಾರ್ (ಸಂಖ್ಯೆ ಜಿಎ-೦೩ ಎಚ್-೮೬೪೪) ತಪಾಸಣೆ ಮಾಡಿದಾಗ ವಾಹನದಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿದೆ.
ಮೂರು ಚೀಲಗಳಲ್ಲಿ ೬೦ ಎಂ.ಎಲ್ ಅಳತೆಯ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಎಂದು ನಮೂದಿರುವ ೯೧೫ ವ್ಯಾಟ-೬೯ ವಿಸ್ಕಿ ಪ್ಲ್ಯಾಸ್ಟಿಕ್ ಬಾಟಲಿಗಳು ಒಟ್ಟು ೫೪.೯೦೦ ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ.
ಆರೋಪಿತರಾದ ಸಲೀಮ ಅಬುಬಕರ ಶೇಖ (ವಯ:೩೯ ವರ್ಷ ಜಾತಿ:ಮುಸ್ಲೀಂ ಉದ್ಯೋಗ: ಡ್ರೈವರ ಸಾ: ಪ್ಲಾಟ್.ನಂ:೨, ಗುಲಮೊಹರ ಸೊಸೈಟಿ, ದಂಗಟ ವಸ್ತಿ, ವಿಕಾಸ ನಗರ, ಕಿವಾಳೆ ದೇಹೂ ರೋಡ, ಕಿವಾಳೆ, ಪೂಣೆ ಮಹಾರಾಷ್ಟ್ರ ರಾಜ್ಯ-೪೧೨೧೦೧) ಮತ್ತು ಪೃಥ್ವಿರಾಜ ವಿನಾಯಕ ಚವ್ಹಾಣ (ವಯ:೩೧ ವರ್ಷ ಜಾತಿ:ಹಿಂದೂ ಬೌದ್ದ ಉದ್ಯೋಗ:ಡ್ರೈವರ ಸಾದ್ದಿಂದ್ರಾಯಣ ದರ್ಶನ, ೫೮೫/೧೫, ಸೇಂಟ್ ಜ್ಯೂಡ್ ಶಾಲೆ ಹಿಂದೆ, ದೇಹೂ ರೋಡ, ಪೂಣೆ, ಮಹಾರಾಷ್ಟ್ರ ರಾಜ್ಯ) ಇವರುಗಳನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ. ಹುಂಡೈ ಐ-೨೦ ಕಾರ್ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.
ದಾಳಿಯನ್ನು ಅಬಕಾರಿ ಅಪರ ಆಯುಕ್ತ ಡಾ:ವೈ ಮಂಜುನಾಥ, ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಹಾಗೂ ಅಬಕಾರಿ ಉಪ ಅಧೀಕ್ಷಕ ಚನಗೌಡ ಎಸ್ ಪಾಟೀಲ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಆರ್.ಬಿ.ಹೊಸಳ್ಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.