ಬೆಳಗಾವಿ: ಮರಾಠಾ ಅಭಿವೃದ್ಧಿ ನಿಗಮಕ್ಕೆ ಯಡಿಯೂರಪ್ಪ ನವರೂ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ ವಿಷಯ ರಾಜ್ಯಾದ್ಯಂತ ಬಹಳ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಅವರು ಕರ್ನಾಟಕ ಬಂದ ಘೋಷಣೆ ಮಾಡಿದ್ದರು, ಆದರೆ ಇದಕ್ಕೆ ಎಲ್ಲ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗುತ್ತದೆ.
ಡಿಸೆಂಬರ ಐದ ರಂದು ಹಮ್ಮಿಕೊಂಡಿರುವ ಕನ್ನಡ ಸಂಘಟನೆ ಗಳ ಬಂದ ಗೆ ಕರವೇ ಗಜಸೇನೆ ವತಿಯಿಂದ ಬೆಂಬಲ ಇಲ್ಲ ಎಂದು ಸಂಘಟನೆಯ ಅಧ್ಯಕ್ಷ ರಾದ ಪವನ ಮಹಾಲಿಂಗಪುರ ಅವರು ನಮ್ಮ ವಾಹಿನಿಗೆ ತಿಳಿಸಿದ್ದಾರೆ.
ಅದೇರೀತಿ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಪರ ಸಂಘಟನೆಗಳ ವಿ ರುದ್ಧ ಮಾತನಾಡಿದ್ದಕ್ಕೆ ಸಿಕ್ಕಲ್ಲಿ ಅವರ್ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ ಎಂದು ಕೂಡ ಯತ್ನಾಳ ವಿರುದ್ಧ ಅಧ್ಯಕ್ಷರಾದ ಪವನ ಮಹಾಲಿಂಗಪುರ ಅವರು ಹೇಳಿದ್ದಾರೆ.
ಈಗಾಗಲೇ ಕರೋ ನಾ ಇಂದ ನಮ್ಮಲ್ಲಿ ಸಾಕಷ್ಟು ಜನ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ನಷ್ಟ ಅನುಭವಿಸಿದ್ದಾರೆ.
ನಮ್ಮ ಕನ್ನಡ ಸಂಘಟನೆ ಜನರ ಬಗ್ಗೆ ಕಾಳಜಿ ವಹಿಸುವುದು ಅವರಿಗೆ ಅವರ್ ಸಮಸ್ಯೆ ಗಳಿಗೆ ಸ್ಪಂದಿಸುವುದು ಹೊರತು ಜನರಿಗೆ ತೊಂದರೆ ಕೊಡುವುದಲ್ಲ ಎಂದು ಕೂಡ ಹೇಳಿದ್ದರು.
ಕೊನೆಯದಾಗಿ ನಾವು ನಮ್ಮ ಸಂಘಟನೆ ವತಿಯಿಂದ ಬಂದಗೆ ಬೆಂಬಲ ಕೊಡಲ್ಲ ಯತ್ನಾಳ ಅವರನ್ನ ಮಸಿ ಹಚ್ಚದೆ ಬಿಡಲ್ಲ ಎಂದು ತಿಳಿಸಿದರು