ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ನೀಲಕಂಠ ಬಸವರಾಜ ಕಪ್ಪಲಗುದ್ದಿ ಇವರು ದಿಬಿಡಿಸಿಸಿ ಬ್ಯಾಂಕಿಗೆ ಎರಡನೇಯ ಬಾರಿಗೆ ನಿರ್ದೇಶಕರಾಗಿ ಅವರೋಧವಾಗಿ ಆಯ್ಕೆಯಾಗಿ ಕಲ್ಲೋಳಿಗೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಹಾಗೂ ರಾಜಕೀಯ ದುರೀಣರು ಹೂ ಮಾಲೆ ಹಾಕಿ ಬರಮಾಡಿಕೊಂಡರು.
ಅವಿರೋಧವಾಗಿ ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೀಲಕಂಠ ಕಪ್ಪಲಗುದ್ದಿ ಪಟ್ಟಣದ ಜಾಗೃತ ದೇವರಾದ ಹನುಮಾನ ದೇವಸ್ಥಾನಕ್ಕೆ ತೇರಳಿ ಹನುಮಾನ ದರ್ಶನ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಈರಪ್ಪ ಹೆಬ್ಬಾಳ, ಸುಭಾಸ ಕುರಬೇಟ, ಬಸವಂತ ದಾಸನವರ, ಮಹಾಂತೇಶ ಕಪ್ಪಲಗುದ್ದಿ, ಬಸವರಾಜ ಯಾದಗೂಡ, ರಾಮಣ್ಣ ಕಂಕಣವಾಡಿ, ಪ್ರಕಾಶ ಕುರಬೇಟ, ಬಸವರಾಜ ಬಾಗೇವಾಡಿ, ಶಿವಪ್ಪ ಪರಸನ್ನವರ, ಮತ್ತು ಯುವಕರಾದ ಮಹಾಂತೇಶ ಮುಂಡಿಗನಾಳ, ಪ್ರಮೋದ ನುಗ್ಗಾನಟ್ಟಿ, ರಾಮಪ್ಪ ಕುರಬೇಟ ಮತ್ತು ಬಸವರಾಜ ಕಪ್ಪಲಗುದ್ದಿ ಸಮೂಹ ಸಂಘ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News