ಗೋಕಾಕ: ನಗರದ ಎಲ್ಲ ಸಾರ್ವಜನಿಕ ಬಂಧುಗಳಿಗೆ ತಿಳಿಸುವದೇನೆಂದರೆ ಬರುವ 01 ನವೆಂಬರ 2021 ರ ಕರ್ನಾಟಕ ರಾಜ್ಯೋತ್ಸವವನ್ನು ಸರಕಾರ ಸೂಚಿಸಿದಂತೆ ಅತಿ ವಿಜೃಂಭಣೆಯಿಂದ ಹಾಗೂ ನಿಯಮಾನುಸಾರ ಆಚರಿಸುವ ನಿಟ್ಟಿನಲ್ಲಿ “ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮವನ್ನು ದಿನಾಂಕ 31-10-2021 ರಂದು ಮುಂಜಾನೆ 10-00 ಘಂಟೆಯಿಂದ ನಗರದ ಸಮುದಾಯ ಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ.
ಆದಕಾರಣ ಸದರಿ ಕಾರ್ಯಕ್ರಮದಲ್ಲಿ ಗೋಕಾಕ ವಲಯದ/ನಗರದ ಆಸಕ್ತ ಸಾರ್ವಜನಿಕರು, ಹಾಗೂ ಮಹಿಳೆಯರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದು, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ
29- 10- 2021 ರಂದು ಮದ್ಯಾಹ್ನ 12-00 ಘಂಟೆಯೊಗಾಗಿ ಕೆಳಗಿನವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಗೋಕಾಕ್ ತಾಲೂಕಾ ದಂಡಾಧಿಕಾರಿಗಳು ತಿಳಿಸಿದ್ದಾರೆ.
ರಂಗೋಲಿ ಬಿಡಿಸುವ ಕಾರ್ಯಕ್ರಮ:- ವಿಜಯಕುಮಾರ ಖನಗಾಂವಿ,(ಬಿ.ಆರ್.ಪಿ) ದೂರವಾಣಿ ಸಂಖ್ಯೆ: 9742021932
• ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮ: ಬಿ ಎಮ್ ವಣ್ಣೂರ,(ಇ.ಸಿ.ಓ) ದೂರವಾಣಿ ಸಂಖ್ಯೆ: 9448191916