Breaking News
Home / Uncategorized / ಆರ್ಯನ್ ಖಾನ್​ ಇಂದು ಬಿಡುಗಡೆ ಆಗೋದು ಡೌಟ್​; ‘ಪಿಕ್ಚರ್ ಅಭಿ ಬಾಕಿ ಹೈ’ ಎಂದ ನವಾಬ್ ಮಲಿಕ್..!

ಆರ್ಯನ್ ಖಾನ್​ ಇಂದು ಬಿಡುಗಡೆ ಆಗೋದು ಡೌಟ್​; ‘ಪಿಕ್ಚರ್ ಅಭಿ ಬಾಕಿ ಹೈ’ ಎಂದ ನವಾಬ್ ಮಲಿಕ್..!

Spread the love

ನವದೆಹಲಿ: ಬಾಲಿವುಡ್​ ಐಷಾರಾಮಿ ಡ್ರಗ್ಸ್​ ಕೇಸ್​ನಲ್ಲಿ ಜೈಲು ಪಾಲಾಗಿದ್ದ ಆರ್ಯನ್​ ಖಾನ್​ಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಿನ್ನೆ ಬಾಂಬೆ ಹೈಕೋರ್ಟ್​ನ ಏಕ ಸದಸ್ಯ ಪೀಠ ಜಾಮೀನು ನೀಡುವ ಮೂಲಕ, ​ಆರ್ಯನ್ ಖಾನ್​ನ 22 ದಿನಗಳ ಜೈಲು ವಾಸದಿಂದ ಮುಕ್ತಗೊಳಿಸಿದೆ. ಆದ್ರೆ ರಿಲೀಸ್​ ಭಾಗ್ಯ ಮಾತ್ರ ಇವತ್ತೂ ಸಿಗೋದು ಡೌಟ್​.

ಡ್ರಗ್ಸ್​ ಕೇಸ್​​ನಲ್ಲಿ ಅಂದರ್​​ ಆಗಿದ್ದ ಆರ್ಯನ್​ಗೆ ಬೇಲ್​​
23 ದಿನಗಳ ಬಳಿಕ ಜೈಲು ಹಕ್ಕಿಗೆ ಬಿಡುಗಡೆಯ ಭಾಗ್ಯ

ಬಾಲಿವುಡ್​ ಐಷಾರಾಮಿ ಡ್ರಗ್​ ಕೇಸ್​ನಲ್ಲಿ ತಗ್ಲಾಕೊಂಡಿದ್ದ ಶಾರೂಖ್​ ಖಾನ್​ ಸುಪುತ್ರ ಆರ್ಯನ್​ ಖಾನ್​ಗೆ ಕೊನೆಗೂ ಜಾಮೀನು ಸಿಕ್ಕಿದೆ. ಸತತ 23 ದಿನಗಳ ಕಾಲ ಕಸ್ಟಡಿಯಲ್ಲಿ ಕಾಲ ಕಳೆದಿದ್ದ ಆರ್ಯನ್​ಗೆ ಬಾಂಬೆ ಹೈಕೋರ್ಟ್​ ಬೇಲ್​ ನೀಡುವ ಮೂಲಕ ರಿಲೀಫ್​ ನೀಡಿದೆ. ಆರ್ಯನ್​ ಜೊತೆಗೆ ಅಂದರ್​ ಆಗಿದ್ದ ಮುನ್​ಮುನ್​ ಧಮೇಚಾ, ಅರ್ಬಾಜ್ ಮರ್ಚೆಂಟ್​ಗೂ ಸಹ ಜಾಮೀನು ನೀಡಿದೆ.

ಆರ್ಯನ್​ ಬಿಡುಗಡೆಗೆ ಹಬ್ಬ ಮಾಡಿದ ಅಭಿಮಾನಿಗಳು
ವಕೀಲರ ಜೊತೆ ಒಗ್ಗಟ್ಟು ಪ್ರದರ್ಶಿಸಿದ ಶಾರೂಖ್​ ಖಾನ್​

ಆರ್ಯನ್ ಖಾನ್​ಗೆ ಬಾಂಬೆ ಹೈಕೋರ್ಟ್​ ಜಾಮೀನು ಮಂಜೂರು ಮಾಡ್ತಿದ್ದಂತೆ, ಆರ್ಯನ್​ ಖಾನ್ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಆರ್ಯನ್​ ಖಾನ್​ ತಂಗಿ ಸುಹಾನ ಖಾನ್​ ತಮ್ಮ ಬಾಲ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರೂಖ್​ ಅಭಿಮಾನಿಯಾಗಿರುವ ಅಜ್ಜಿಯೊಬ್ಬರು ಆರ್ಯನ್​ ಖಾನ್​ ಬಿಡುಗಡೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಇತ್ತ ಬೇಲ್​ ಸಿಗ್ತಿದ್ದಂತೆ ಶಾರೂಖ್​ ಕೂಡ ಆರ್ಯನ್​ ಪರ ವಕೀಲ ಅಮಿತ್ ದೇಸಾಯಿ, ವಕೀಲ ಸತೀಶ್ ಮಾನ್​ಶಿಂಧೆ ಜೊತೆಗೆ ಶಾರುಖ್ ಖಾನ್ ಪೋಸ್ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ನಾಳೆ ಆರ್ಯನ್​ ಬಿಡುಗಡೆ ಸಾಧ್ಯತೆ
ನಿನ್ನೆ ಬಾಂಬೆ ಹೈಕೋರ್ಟ್​ ಆರ್ಯನ್​ ಖಾನ್​ಗೆ ಜಾಮೀನು ಮಂಜೂರು ಮಾಡಿದೆ.. ಬಾಂಬೆ ಹೈಕೋರ್ಟ್​ನ ಜಾಮೀನು ಆದೇಶದ ಪ್ರತಿ ಇಂದು ಅರ್ಥರ್​ ಜೈಲಾಧಿಕಾರಿಗಳಿಗೆ ರವಾನೆ ಆಗಲಿದೆ. ಇನ್ನೂ ಎನ್​ಸಿಬಿ ಅಧಿಕಾರಿಗಳಿಗೂ ಕೂಡ ಜಾಮೀನು ಆದೇಶ ಪ್ರತಿ ಕೈ ಸೇರಲಿದೆ. ಇಂದೇ ಜಾಮೀನಿನ ಎಲ್ಲಾ ಕಾನೂನು ಪ್ರಕ್ರಿಯೆ ಸಂಪೂರ್ಣಗೊಳ್ಳಲಿದ್ದು, ಸಂಜೆಯೊಳಗೆ ​ಆರ್ಯನ್​ ಖಾನ್​ ವಕೀಲರಿಂದ ಜಾಮೀನು ಪ್ರತಿ ಜೈಲಾಧಿಕಾರಿಗಳ ಕೈ ಸೇರಲಿದೆ. ಇನ್ನೂ ಎಲ್ಲಾ ಅಂದುಕೊಂಡಂತೆ ಆದ್ರೆ ನಾಳೆ ಮಧ್ಯಾಹ್ನದ ಒಳಗೆ ಆರ್ಯನ್​​ ಖಾನ್​ ಗ್ರ್ಯಾಂಡಾಗಿ ರಿಲೀಸ್​ ಆಗಲಿದ್ದಾರೆ.

ಪ್ರಸ್ತುತ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ತನ್ನದೇ ಇಲಾಖೆಯಲ್ಲಿ ಆಂತರಿಕ ತನಿಖೆಯನ್ನು ಎದುರಿಸುತ್ತಿದ್ದಾರೆ. ಜೊತೆಗೆ ಲಂಚ ಮತ್ತು ಸುಲಿಗೆ ಆರೋಪದ ಮೇಲೆ ಮುಂಬೈ ಪೊಲೀಸರಿಂದ ಆಂತರಿಕ ತನಿಖೆಯನ್ನು ಎದುರಿಸುತ್ತಿರುವ ವಾಂಖೆಡೆ ವಿರುದ್ಧ ನವಾಬ್​ ಮಲ್ಲಿಕ್​ ಹೊಸ ಬಾಂಬ್​ ಸಿಡಿಸಿರುವುದು ಈ ತನಿಖೆಯಲ್ಲಿ ಸಂಚಲನ ಸೃಷ್ಟಿಸಿದೆ.

ಸಮೀರ್​ ವಾಂಖೆಡೆಗೆ ಮಲಿಕ್​ ಟಾಂಗ್​
ಆರ್ಯನ್​ ಖಾನ್​ ಜಾಮೀನು ಸಿಕ್ಕಿದ ಬೆನ್ನಲ್ಲೇ ಎನ್​ಸಿಬಿ ಅಧಿಕಾರಿ ಸಮೀರ್​ಗೆ ಟಾಂಗ್​ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮೀರ್​ ವಾಂಖೆಡೆಗೆ ಮಲಿಕ್​ ಟಾಂಗ್​ ಕೊಟ್ಟಿದ್ದು, ಪಿಕ್ಚರ್​ ಅಭಿ ಬಾಕಿ ಹೈ ದೋಸ್ತ್​​ ಎಂದು ಟ್ವಿಟರ್​​ನಲ್ಲಿ ಸಮೀರ್​ ವಾಖೆಂಡೆಗೆ ಎನ್​ಸಿಪಿ ಸಚಿವ ನವಾಬ್​ ಮಲಿಕ್ ಕುಟುಕಿದ್ದಾರೆ. ಸಮೀರ್​ ಮುಂಬೈ ಪೊಲೀಸರು ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತರುವ ಮೂಲಕ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅವರು ನಿಜವಾಗಲೂ ತಪ್ಪಿತಸ್ಥರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ, ತಾವು ತಪ್ಪು ಮಾಡಿರುವ ಕಾರಣ ಕಾನೂನು ರಕ್ಷಣೆ ಕೋರುತ್ತಿದ್ದಾರೆ. ಸಮೀರ್​​ನ ಇನ್ನಷ್ಟು ಸತ್ಯಗಳು ಹೊರಬರಲಿವೆ ಅಂತ ನವಾಬ್ ಮಲ್ಲಿಕ್​​ ಕಿಡಿ ಕಾರಿದ್ದಾರೆ.

23 ದಿನಗಳ ಬಳಿಕ ಆರ್ಯನ್​ ಖಾನ್ ಅರ್ಥರ್​ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇನ್ನೂ ಈ ಐಷಾರಾಮಿ ಡ್ರಗ್ಸ್​ ಪ್ರಕರಣದ ತನಿಖೆ ಆರ್ಯನ್​ ಬಿಡುಗಡೆಯ ಜೊತೆಗೆ ಹಳ್ಳ ಹಿಡಿಯುತ್ತೋ ಅಥವಾ ಮುಂದೆ ಮತ್ತಷ್ಟು ತಿರುವು ಪಡೆದುಕೊಳ್ಳುವ ಮೂಲಕ ನಶೆಕೋರರಿಗೆ ಶಾಕ್​ ಕೊಡುತ್ತೋ ಕಾದು ನೋಡಬೇಕಿದೆ.

 


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ