Breaking News

ರಾಜ್ಯ

ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಪ್ರಕರಣವೊಂದರಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ

ತುಮಕೂರು: ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನೀಡಿದಕ್ಕೆ ಬಿಜೆಪಿ ಕಾರ್ಯಕರ್ತ್ರು ಜೆಡಿಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜರುಗಿದೆ. ಹೊನ್ನೇನಹಳ್ಳಿಯ ರಾಧಾಕೃಷ್ಣ, ಸಂಜೀವಮ್ಮ, ರಂಗಸ್ವಾಮಯ್ಯ, ಶ್ರೀನಿವಾಸ್ ಗಾಯಗೊಂಡಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಸಾಕ್ಷೀದಾರ ರಾಧಾಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಪ್ರಕರಣವೊಂದರಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ …

Read More »

ಕೆಲವು ದಿನಗಳ ಬಳಿಕ ಸಿಕ್ಕವು ಮೀನುಗಾರರ ಶವಗಳು

ಕೃಷ್ಣಾ ನದಿಯಲ್ಲಿ ಗುರುವಾರ ಮೀನುಗಾರಿಕೆ ಮಾಡಲು ಹೋಗಿ ನಾಪತ್ತೆ ಯಾಗಿದ್ದ ಇಬ್ಬರ ಸಾವು ಸಂಭವಿಸಿದೆ. ಬಇಂದು ಕೃಷ್ಣಾ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಪರಶುರಾಮ ಲಮಾಣಿ ಹಾಗೂ ರಮೇಶ ಲಮಾಣಿ ಶವ ಪತ್ತೆಯಾಗಿವೆ. ತೆಪ್ಪದಲ್ಲಿ ಮೀನು ಹಿಡಿಯಲು ಮೂವರು ಜನ ಮೀನುಗಾರರು ತೆರಳಿದ್ದರು. ಗುರುವಾರ ಸಂಜೆ ಬೀಸಿದ ಭಾರಿ ಮಳೆಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿತ್ತು ಅದೃಷ್ಟವಶಾತ್ ಮೂವರ ಪೈಕಿ ಓರ್ವ ಅಕ್ಷಯ ಲಮಾಣಿ ಈಜಿ ದಡ ಸೇರಿದ್ದ. ಆ ಸಂದರ್ಬದಲ್ಲಿ …

Read More »

ಏಳೆಂಟು ತಿಂಗಳಿನಿಂದ ಗ್ರಾ.ಪಂ ನೌಕರರಿಗೆ ಸಿಕ್ಕಿಲ್ಲ ಸಂಬಳ..!

ಬೆಂಗಳೂರು, ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಸಾವಿರಾರು ನೌಕರರಿಗೆ ಕಳೆದ 8 ತಿಂಗಳಿನಿಂದ ವೇತನ ಬಂದಿಲ್ಲ. ರಾಜ್ಯದಲ್ಲಿ 6,081 ಗ್ರಾಮ ಪಂಚಾಯತ್‍ಗಳಿದ್ದು ಅದರಲ್ಲಿ ಕನಿಷ್ಠವೆಂದರೂ 50 ಸಾವಿರ ಮಂದಿ ಬಿಲ್ ಕಲೆಕ್ಟರ್, ವಾಟರ್ ಮೆನ್, ಅಂಕಿ ಅಂಶ ಸಂಗ್ರಾಹಕರು ಮತ್ತು ಅಟೆಂಡರ್ ಆಗಿ ಕರ್ತವ್ಯದಲ್ಲಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಲಾಕ್‍ಡೌನ್ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸುವುದು, ಆರೋಗ್ಯ ಕಿಟ್‍ಗಳನ್ನು …

Read More »

ಪತಿಯ ಕಿಡ್ನ್ಯಾಪ್​ಗೆ ಮೊದಲ ಪತ್ನಿಯದ್ದೇ ಸುಪಾರಿ!

ಬೆಂಗಳೂರು: 2ನೇ ಮದುವೆಯಾದ ಪತಿಯ ಅಪಹರಣಕ್ಕೆ ಮೊದಲ ಪತ್ನಿಯೇ ಸುಪಾರಿ ಕೊಟ್ಟ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆಯ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಶಾಹೀದ್ ಶೇಖ್ ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ. ಹೆಸರಘಟ್ಟದ ಅಭಿಷೇಕ್ (26), ನಾಗಸಂದ್ರದ ಭರತ್ (25), ಜೆ.ಪಿ.ನಗರದ ಪ್ರಕಾಶ (22) ಹಾಗೂ ಬ್ಯಾಡರಹಳ್ಳಿಯ ಚೆಲುವಮೂರ್ತಿ (22) ಬಂಧಿತರು. ಸುಪಾರಿ ಕೊಟ್ಟ ಪ್ರಮುಖ ಆರೋಪಿ ಮೊದಲ ಪತ್ನಿ ರೋಮಾ ಶೇಖ್ ಸೇರಿ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಉತ್ತರ …

Read More »

ಬೆಂಗಳೂರಿನ ತ್ರಿಕೋನ ಪ್ರೇಮಕತೆ ಕೊಲೆಯಲ್ಲಿ ಅಂತ್ಯ; ಕೈಕೊಟ್ಟ ಪ್ರೇಯಸಿ ಮಸಣ ಸೇರಿದಳು!

ಬೆಂಗಳೂರು. ಆಟೋ ಚಾಲಕನ ಮಗಳಾಗಿ ಹುಟ್ಟಿ ಆರ್ಕಿಟೆಕ್ಚರ್ ಎಂಜಿನಿಯರ್ ಆಗಿ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವತಿ ಮಸಣ ಸೇರಿದ್ದಾಳೆ. ಹಳಿ ತಪ್ಪಿದ ಯುವತಿಯ ನಡೆ ದುರಂತ ಅಂತ್ಯ ಕಂಡಿದ್ದು ದುರದೃಷ್ಟಕರ ಸಂಗತಿ. 5 ವರ್ಷದ ಪ್ರೀತಿಗೆ ಕೈಕೊಟ್ಟು ಎಂದು ಮಾಜಿ ಪ್ರಿಯಕರನ ಸ್ನೇಹಿತನ ಜೊತೆ ಹೋದ ಯುವತಿ ಶವವಾಗಿದ್ದಾಳೆ.   ಈ ಪ್ರೀತಿ ಅನ್ನೋದೆ ಹೀಗೆ… ಪ್ರೀತಿ ಪಡೆಯೋಕೆ ಏನು ಬೇಕಾದರೂ ಮಾಡಿಸುತ್ತದೆ. ಅದೇ ರೀತಿ ಪ್ರೀತಿ ಕಳೆದುಕೊಂಡಾಗ …

Read More »

ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಆರಂಭಿಕ ದಿನಗಳ ದೊಡ್ಡ ಯಶಸ್ಸೆಂದರೆ 2008ರ ಅಂಡರ್‌-19 ವಿಶ್ವಕಪ್‌

ಮುಂಬಯಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಆರಂಭಿಕ ದಿನಗಳ ದೊಡ್ಡ ಯಶಸ್ಸೆಂದರೆ 2008ರ ಅಂಡರ್‌-19 ವಿಶ್ವಕಪ್‌ ಗೆಲುವು. ಆಗ ಕೊಹ್ಲಿ ಕಿರಿಯರ ತಂಡದ ಕಪ್ತಾನ. ಹೀಗಾಗಿ ಮುಂದೊಂದು ದಿನ ಇವರು ಸೀನಿಯರ್‌ ತಂಡವನ್ನು ಪ್ರವೇಶಿಸುವುದು ಖಾತ್ರಿಯಾಗಿತ್ತು. ಕೊಹ್ಲಿಯ ಅಂದಿನ ದಿನಗಳನ್ನು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ “ಕರ್ನಲ್‌’ ದಿಲೀಪ್‌ ವೆಂಗ್‌ಸರ್ಕಾರ್‌ ನೆನಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ 2008ರ “ಎ’ ತಂಡಗಳ ಎಮರ್ಜಿಂಗ್‌ ಪ್ಲೇಯರ್ ಟೂರ್ನಿ ವೇಳೆ ವಿರಾಟ್‌ ಕೊಹ್ಲಿ …

Read More »

ನಗರದಲ್ಲಿ ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಕಸಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ-2020ರಡಿ ಮಾಸಿಕ 200

ಬೆಂಗಳೂರು: ನಗರದಲ್ಲಿ ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಕಸಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ-2020ರಡಿ ಮಾಸಿಕ 200 ರೂ. ನಿಗದಿ ಮಾಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯಮ ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ. ಉದ್ದೇಶಿತ ಶುಲ್ಕ ವಿಧಿಸುವ ಸಂಬಂಧ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಾರ್ವಜ ನಿಕರು ಆಸ್ತಿ ತೆರಿಗೆ ಜತೆಗೆ ಶೇ.2 ತ್ಯಾಜ್ಯ ಉಪಕರ ನೀಡುತ್ತಿದ್ದಾರೆ. ಈಗ ಹೊಸ ಉಪನಿಯಮದಿಂದ …

Read More »

ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು.

ಇವತ್ತು ಕರ್ನಾಟಕ ಪ್ರಜಾ ರಕ್ಷಣೆ ಸೇನೆ (ರಿ) ನಮ್ಮ ಗೋಕಾಕ ತಾಲೂಕ ಘಟಕ ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು. ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಜೆ ಯತಿಶಗೌಡ್ರ ಅವರ ಮಾರ್ಗದರ್ಶನ ಮತ್ತು ಕಾರ್ಮಿಕ ಘಟಕದ ರಾಜ್ಯಾದ್ಯಕ್ಷರಾದ ಎಂ ವೀ ಮಂಜುನಾಥ, ಯುವ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕುಮಾರ ಆಚಾರಿ ಅವರ ಮಾರ್ಗದರ್ಶನ ಮೂಲಕ ಸುಮಾರು ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು, ಹೋರಾಟಗಳು ಮಾಡ್ತಾಬಂದಿದ್ದು, ಇವತ್ತು ದ್ವಿತೀಯ ವರ್ಷಾಚರಣೆಯನ್ನು ಗೋಕಾಕದ ಶಿವಾ ಪೌಂಡೆಶನ ಅನಾಥ ಮಕ್ಕಳಿಗೆ,ಬೇಟೆಗೆರಿಯ …

Read More »

ಗುಡ್ಡದಿಂದ ಬೈಕ್ ಮೇಲೆ ಉರುಳಿದ ಕಲ್ಲುಬಂಡೆ- ಬೈಕ್ ಸಂಪೂರ್ಣ ಜಖಂ, ಸವಾರ ಪಾರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ತೆರವು ಮಾಡಿದ್ದ ಗುಡ್ಡದಿಂದ ಬೃಹತ್ ಕಲ್ಲುಬಂಡೆಯೊಂದು ರಸ್ತೆ ಮೇಲೆ ಉರುಳಿಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಗಿರೀಶ್ ಬುಧವಂತ ನಾಯ್ಕ ಬಚಾವ್ ಆದ ಸವಾರ. ಬೃಹತ್ ಬಂಡೆ ರಸ್ತೆ ಮೇಲೆ ಉರುಳಿ ಬಂದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ಬೈಕ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. …

Read More »

ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ………….

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ (38) ನಾಪತ್ತೆಯಾಗಿರುವ ಮೀನುಗಾರರು. ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗಿಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದಾನೆ. ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. …

Read More »