ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ.
ರೆಡ್ ಝೋನ್ ಮೈಸೂರು ಜಿಲ್ಲೆಯಲ್ಲಿ ಒಟ್ಟು 28 ಕಂಟೈನ್ಮೆಂಟ್ ವಲಯಗಳಿವೆ. ಇದರಲ್ಲಿ ಮೈಸೂರು ನಗರದ ಕೆಲವು ಪ್ರದೇಶ, ನಂಜನಗೂಡಿನ ಕೆಲವು ಬಡಾವಣೆ, ಮೈಸೂರು ತಾಲೂಕು ಕೆಲವು ಏರಿಯಾ ಹಾಗೂ ಟೀ ನರಸೀಪುರದ 1 ಗ್ರಾಮ ಸೇರಿವೆ.
ಸಿಲಿಕಾನ್ ಸಿಟಿಯಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್ಮೆಂಟ್ ಝೋನ್ನಿಂದ ಕೈ ಬಿಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್ಮೆಂಟ್ ಝೋನ್ನಿಂದ ಕೈ ಬಿಡಲಾಗಿದೆ.
ಆರೆಂಜ್ ಝೋನ್ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್ಮೆಂಟ್ ವಲಯಗಳಿವೆ. ಮಳವಳ್ಳಿ ಪಟ್ಟಣದಲ್ಲಿ 7, ಮಂಡ್ಯ ನಗರದ ಪೇಟೆ ಬೀದಿ, ಸ್ವರ್ಣಸಂದ್ರ ಬಡಾವಣೆ, ನಾಗಮಂಗಲದ 1 ಬಡಾವಣೆ, ಪಾಂಡವಪುರದ ಡಿ ಕೋಡಗಹಳ್ಳಿ, ಕೆ.ಆರ್.ಪೇಟೆ ರಾಜಘಟ್ಟ ಕಂಟೈನ್ಮೆಂಟ್ ಝೋನ್ಗಳಾಗಿವೆ.
ಆರೆಂಜ್ ಝೋನ್ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 18 ಕಂಟೈನ್ಮೆಂಟ್ ವಲಯಗಳಿವೆ. ಕಲಬುರಗಿ ನಗರದಲ್ಲಿ 15, ಚಿತ್ತಾಪುರದಲ್ಲಿ 2 ಹಾಗೂ ಆಳಂದದಲ್ಲಿ 1 ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 10 ಕಂಟೈನ್ಮೆಂಟ್ ವಲಯಗಳಿವೆ. ಜಮಖಂಡಿ 3 ಏರಿಯಾ, ಮುಧೋಳದ ಸಾಯಿನಗರ ಬಡಾವಣೆ, ಬಾಗಲಕೋಟೆ ನಗರದ 6 ವಾರ್ಡ್ ಕಂಟೈನ್ಮೆಂಟ್ ಝೋನ್ಗಳಾಗಿವೆ.
ಆರೆಂಜ್ ಝೋನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಕಂಟೈನ್ಮೆಂಟ್ ವಲಯಗಳಿವೆ. ಮಂಗಳೂರು ನಗರದಲ್ಲೇ 4, ಬಂಟ್ವಾಳದಲ್ಲಿ 3, ಪುತ್ತೂರಿನಲ್ಲಿ 2 ಇವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್ಮೆಂಟ್ ವಲಯಗಳಿವೆ. ಹಿರೇಬಾಗೇವಾಡಿಯಲ್ಲಿ 3, ಬೆಳಗಾವಿ ನಗರದಲ್ಲಿ 1, ಹುಕ್ಕೇರಿಯಲ್ಲಿ 1, ರಾಯಬಾಗದಲ್ಲಿ 1 ಇದೆ.
ಕಿತ್ತಳೆ ವಲಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್ಮೆಂಟ್ ವಲಯಗಳಿವೆ. ಚಿಕ್ಕಬಳ್ಳಾಪುರ ನಗರದ 4 ವಾರ್ಡ್, ಗೌರಿಬಿದನೂರಿನ 2 ವಾರ್ಡ್ ಕಂಟೈನ್ಮೆಂಟ್ ಝೋನ್ಗಳಾಗಿವೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 4 ಕಂಟೈನ್ಮೆಂಟ್ ವಲಯಗಳಿವೆ. ವಿಜಯಪುರದ ಚಪ್ಪರ್ ಬಂದ್ ಸುತ್ತಮುತ್ತಲ ಪ್ರದೇಶ 3, ಬಾರಾಮಮಾನ್ 1 ಇದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3 ಕಂಟೈನ್ಮೆಂಟ್ ವಲಯಗಳಿವೆ. ಹೊಸಪೇಟೆ ನಗರ, ಸಿರಗುಪ್ಪ ಎಚ್ ಹೊಸಹಳ್ಳಿ, ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ಕಂಟೈನ್ಮೆಂಟ್ ಝೋನ್ಗಳಾಗಿವೆ. ಬೀದರ್ ನಲ್ಲಿ ಒಟ್ಟು 2 ಕಂಟೈನ್ಮೆಂಟ್ ಝೋನ್ಗಳಿವೆ. ಬೀದರ್ ತಾಲೂಕು ಓಲ್ಡ್ ಸಿಟಿ ಹಾಗೂ ಬಸವಕಲ್ಯಾಣ. ದಾವಣಗೆರೆಯ 2 ಪ್ರದೇಶ ಭಾಷಾನಗರ ಹಾಗೂ ಜಾಲಿನಗರ, ಗದಗನ ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ಸರ್ಕಲ್ ಪ್ರದೇಶಗಳು ಕಂಟೈನ್ಮೆಂಟ್ ಝೋನ್ಗಳಾಗಿವೆ.
ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ಮಾತ್ರ ಕಂಟೈನ್ಮೆಂಟ್ ಝೋನ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.