Breaking News

ರಮೇಶ್ ಕಾಂಗ್ರೆಸ್ ಗೆ ಬಂದ್ರೆ ಹೇಗೆ ಮಾಜಿ ಆಗ್ತೇನಿ : ಸಚಿವ ರಮೇಶಗೆ ಶಾಸಕ ಸತೀಶ್ ಜಾರಕಿಹೊಳಿ ತಿರುಗೇಟು ಬೆಳಗಾವಿ ಉಪಚುನಾವಣೆ ಬಿಜೆಪಿ V/S ಕಾಂಗ್ರೆಸ್

Spread the love

ಬೆಳಗಾವಿ : ಯಮಕನಮರಡಿ ಶಾಸಕರು 2023ರಲ್ಲಿ ಎಲ್ಲದರಲ್ಲೂ ಮಾಜಿ ಆಗುತ್ತಾರೇ ಎಂಬ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ ತಿರುಗೇಟು ನೀಡಿದ್ದಾರೆ.

ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೇ ಮತ್ತೆ ಕಾಂಗ್ರೆಸ್ ಬರುತ್ತಾರೇ ಎನ್ನುವ ನೀವು. ಅವರ ಕಾಂಗ್ರೆಸ್ ಗೆ ಬಂದ್ರೆ ನಾನು ಹೇಗೆ ಮಾಜಿ ಆಗುತ್ತೇನೆ. ಹೇಳುವುದು ಸುಲಭ, ಆದ್ರೆ ಕಾರ್ಯ ರೂಪಕ್ಕೆ ತರುವುದು ಕಷ್ಠ. ನಾವು ಸಹ ಮುಂದಿನ ಚುನಾವಣೆಯಲ್ಲಿ ಬೆಳಗಾವಿಯ 18 ಸ್ಥಾನ ಗೆಲ್ಲುತ್ತೇವೆ ಹೇಳಬಹುದು ಎಂದರು.

ಜಾರಕಿಹೊಳಿ ಸಹೋದರರು ಅಜೆಸ್ಟ್ಮೆಂಟ್ ರಾಜಕಾರಣ ಮಾಡುವುದಾಗಿದ್ರೆ, ಈ ಹಿಂದಿನ ವಿಧಾನಸಭೆ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಿರುಸಿನ ಪ್ರಚಾರ ಮಾಡುತ್ತಿರಲಿಲ್ಲ. ಅರಾಮ ಆಗಿ ಮಾಡಿದ್ರೆ ನಮಗೂ ಸಹ ಒಂದೆರಡೂ ಕೆಲಸ ಸಿಗುತ್ತಿದ್ದವು ಎಂದು ಮಾಧ್ಯಮದವರ ಪ್ರಶ್ನೇ ಪ್ರತಿಕ್ರಿಯೆ ನೀಡಿದರು.

ಬೆಳಗಾವಿ ಉಪಚುನಾವಣೆ ರಮೇಶ್ ವರ್ಚಸ್ ಸತೀಶ್ ಆಗಲಿದಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲಿ ಸತೀಶ್ ಜಾರಕಿಹೊಳಿ ವರ್ಚಸ್ ರಮೇಶ್ ಜಾರಕಿಹೊಳಿ ಬರುವುದಿಲ್ಲ. ಪಕ್ಷದ ಆದಾರದ ಮೇಲೆ ನಡೆಯಲಿದೆ. ಬಿಜೆಪಿ ವರ್ಚಸ್ ಕಾಂಗ್ರೆಸ್ ಗೆ ನಡೆಯಲಿದೆ. ಇನ್ನೂ ರಮೇಶ್ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ಸ್ವಾಗತ ಮಾಡುತ್ತಿರಾ ಎಂಬ ಪ್ರಶ್ನೇಗೆ ಅದು ಕಾಂಗ್ರೆಸ್ ವರಿಷ್ಠರಿಗೆ ಬಿಟ್ಟಿದ್ದು ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ :

ಮಹಾರಾಷ್ಟ್ರ ಶಿವಸೇನೆ ನಾಯಕರು ಶಿನ್ನೋಳಿ ಗ್ರಾಮದ ಮೂಲಕ ಗಡಿ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಯಾರೇ ಉಲ್ಲಂಘನೆ ಮಾಡಿದ್ರು ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಉದ್ದವ್ ಠಾಕ್ರೆ ಹೇಳಿಕೆ ಬಗ್ಗೆ ಸಿಎಂ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅನೇಕರು ಮಾತನಾಡಿದ್ದಾರೆ. ಯಾರೇ ತಪ್ಪಿತಸ್ಥರ ಇದ್ರು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


Spread the love

About Laxminews 24x7

Check Also

ಎರಡನೇ ಬೆಳೆಗೆ ನೀರು ಬಿಡದಿದ್ದರೆ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಮಾಜಿ ಸಚಿವ ಶ್ರೀರಾಮುಲು

Spread the loveಕೊಪ್ಪಳ: ಮೈಸೂರು ಭಾಗದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಕಾಂಗ್ರೆಸ್​ನವರು ಹೋರಾಟ ಮಾಡಿದ್ದರು. ಟಿಬಿ ಡ್ಯಾಂನಿಂದ ಎರಡನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ