ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಂಕಷ್ಟಕೀಡಾಗಿದ್ದ ಗೋವಾದ ಕನ್ನಡಿಗರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಸಹಾಯ ಹಸ್ತ ಕೋರಿದ್ದು, ಆಹಾರ ಧಾನ್ಯ ಸೇರಿ ಅಗತ್ಯವಸ್ತುಗಳನ್ನು ವಿತರಿಸಿದ್ದಾರೆ.
ಗೋವಾದಲ್ಲಿ ನೆಲೆಸಿರುವ ಯಮಕನಮರಡಿ ಕ್ಷೇತ್ರದ ಚಿಕ್ಕಾಲಗುಡ್ಡ ಗ್ರಾಮದ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ತೊಂದರೆಗೀಡಾಗಿದ್ದರು.
ಈ ವಿಷಯವನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಸತೀಶ ಜಾರಕಿಹೋಳಿ ತಕ್ಷಣ ಅಲ್ಲಿಯೇ ದಿನಸಿ ಖರೀದಿಸಿ ತೊಂದರೆಯಲ್ಲಿರುವ ಕನ್ನಡಿಗರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ .
ಅಗತ್ಯ ವಸ್ತುಗಳಾದ ದಿನಸಿಗಳ ಕಿಟ್ ಗಳನ್ನ ಕನ್ನಡಿಗರಿಗೆಮುಟ್ಟಿಸಲಾಗುತ್ತಿದೆ .ಕಷ್ಟದಲ್ಲಿರುವ ತನ್ನ ಕ್ಷೇತ್ರದ ಜನರು ಎಲ್ಲಿಯೇ ಇದ್ದರು ಅವರ ಕಷ್ಟಕ್ಕೆ ಸ್ಪಂಧಿಸಿರುವ ಶಾಸಕ ಸತೀಶ ಜಾರಕಿಹೋಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ