ಬೆಂಗಳೂರು : ನನ್ನನ್ನು ಮೊಗಸಾಲೆಗೂ ಬಿಡುತ್ತಿಲ್ಲ. ಸದನದೊಳಗೆ ಬಿಡುತ್ತಿಲ್ಲ. ವಿಧಾನಸೌಧವೇನು ಸ್ಪೀಕರ್ ಕಾಗೇರಿ ಅವರದ್ದಾ? ಎಂದು ವಿಧಾನಸೌಧದಿಂದ ಒಂದು ವಾರ ಅಮಾನತುಗೊಂಡಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕಿಡಿಕಾರಿದ್ದಾರೆ.
https://kannadanewsnow.com/kannada/ramesh-jarkiholi-followers-protest-in-gokak/https://kannadanewsnow.com/kannada/ramesh-jarkiholi-followers-protest-in-gokak/
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸದನದೊಳಗೆ ಬೇಡ, ಮೊಗಸಾಲೆಗೂ ಬಿಡಲ್ಲ ಅಂದರೆ ಹೇಗೆ? ವಿಧಾನಸೌಧವೇನು ಸ್ಪಿಕರ್ ಕಾಗೇರಿ ಅವರದ್ದಾ? ವಿಧಾನಸೌಧ ಜನರಿಗೆ ಸೇರಿದ್ದು, ಸ್ಪೀಕರ್ ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ನನಗೆ ಅನ್ಯಾಯವಾಗಿದೆ. ನ್ಯಾಯ ಕೇಳಿದ್ದೇನೆ. ನನ್ನ ಕುಟುಂಬದ ಮೇಲೆ ಕೇಸ್ ಹಾಕಿಸಿದ್ದಾರೆ. ಅದಕ್ಕೆ ನು ಶರ್ಟ್ ಬಿಚ್ಚಿ ಗಮನ ಸೆಳೆದಿದ್ದು, ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ ಎಂದು ಹೇಳಿದ್ದಾರೆ.