Breaking News

ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನ:ಅನಿಲ ಬೆನಕೆ

Spread the love

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿ ಚಾಲನೆ ನೀಡಲಾಗಿದೆ ಎಂದರು.

ಅದರಂತೆಯೇ ರಾಮತೀರ್ಥ ನಗರದಲ್ಲಿನ ಬಡಾವಣೆಗಳಲ್ಲಿ ಆರ್.ಸಿ.ಸಿ ಒಳಚರಂಡಿ ಕಾಮಗಾರಿ, ಆರ್.ಸಿ.ಸಿ ನಾಲಾ ನಿರ್ಮಾಣ, ರಸ್ತೆ ಅಭಿವೃದ್ದಿಗೊಳಿಸುವ ಕಾಮಗಾರಿ, ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಹಾಗೂ ಉದ್ಯಾನವನಗಳ ಅಭಿವೃಧ್ದಿಗೊಳಿಸಲು ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ಟೆಂಡರ್ ಮಾಡಿಸಲಾಗಿದೆ ಎಂದರು.

ಟೆಂಡರ್ ಮುಗಿದ ತಕ್ಷಣ ಬಡಾವಣೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ