Breaking News
Home / Uncategorized / ಕೊಟ್ಟ ಮಾತು ಉಳಿಸಿಕೊಂಡ B.S.Y. – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

ಕೊಟ್ಟ ಮಾತು ಉಳಿಸಿಕೊಂಡ B.S.Y. – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

Spread the love

ತುಮಕೂರು: ಇಂದು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿದು ಬಂದಿದ್ದು, ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಶಿರಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ಳೆದ ತಿಂಗಳು ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಮದಲೂರು ಕೆರೆಗೆ ನೀರನ್ನು ಹರಿಸುತ್ತೇವೆ ಎಂಬ ಪ್ರಮುಖ ಅಜೆಂಡಾವನ್ನು ಇಟ್ಟುಕೊಂಡಿತ್ತು. ಅದರಂತೆ ಇಂದು ಮದಲೂರು ಕೆರೆಗೆ ನೀರು ಬಂದು ತಲುಪಿದೆ. ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿತ್ತು. ಸತತ 6 ದಿನಗಳ ಬಳಿಕ ಇಂದು ಸಂಜೆ 6 ಗಂಟೆ ಸುಮಾರಿಗೆ ಮದಲೂರು ಕೆರೆಗೆ ನೀರು ಹರಿದು ಬಂದಿದೆ.

250 ಕ್ಯುಸೆಕ್ ನೀರು ಹರಿಯುತಿದ್ದು ಒಂದು ತಿಂಗಳ ಬಳಿಕ ಮದಲೂರು ಕೆರೆ ಭರ್ತಿಯಾಗಲಿದೆ. ಶಿರಾ ತಾಲೂಕಿನ 40 ಹಳ್ಳಿಗಳಿಗೆ ಕುಡಿಯುವ ನೀರು ಈ ಕೆರೆಯಿಂದ ಒದಗಿಸಲಾಗುತ್ತದೆ. ಉಪಚುನಾವಣೆಯ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಕೆರೆಗೆ ನೀರು ಹರಿಸುವ ವಾಗ್ದಾನ ಮಾಡಿದ್ದರು. ಅದರಂತೆ ನೀರು ಹರಿಸಿದ್ದಾರೆ.


Spread the love

About Laxminews 24x7

Check Also

ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Spread the loveಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ