Breaking News

ಕಾರುಚಾಲಕನಿಂತಿರುವ ಮಹಿಳೆಗೆ ಗುದ್ದಿಪ್ರಶ್ನೆ ಮಾಡಲು ಬಂದಿರುವ ವ್ಯಕ್ತಿ ಬಾನೆಟ್ ಮೇಲೆ ಏರಿದ್ರೂ ಕಾರ್ ನಿಲ್ಲಿಸಿದೇಹೋಗಿರುವ ಘಟನೆ

Spread the love

ಬೆಂಗಳೂರು: ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಕಾರು ನುಸುಳಿಸಿದ ಚಾಲಕ ರಸ್ತೆಯಲ್ಲಿ ನಿಂತಿರುವ ಮಹಿಳೆಗೆ ಗುದ್ದಿದ್ದಾನೆ. ಪ್ರಶ್ನೆ ಮಾಡಲು ಬಂದಿರುವ ವ್ಯಕ್ತಿ ಬಾನೆಟ್ ಮೇಲೆ ಏರಿದ್ರೂ ಕಾರ್ ನಿಲ್ಲಿಸಿದೇ ಚಲಾಯಿಸಿಕೊಂಡು ಹೋಗಿರುವ ಘಟನೆ ಯಲಹಂಕದ ನಾಒನ್‍ವೇ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವ ಚಾಲಕ ಮಹಿಳೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾರು ಚಾಲಕನ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.ಗೇನಹಳ್ಳಿ ಗೇಟ್ ಬಳಿ ನಡೆದಿದೆ.

ವಿಡಿಯೋದಲ್ಲಿ ಏನಿದೆ?
ಯಲಹಂಕದ ನಾಗೇನಹಳ್ಳಿ ಗೇಟ್‍ನ ದೊಡ್ಡಬಳ್ಳಾಪುರ, ಯಲಹಂಕ ಹೆದ್ದಾರಿಯಲ್ಲಿ ಒನ್‍ವೇ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಜಾಗ ಇಲ್ಲದೆ ಇದ್ದರು ಕಾರು ಮುಂದಕ್ಕೆ ಹೋಗಲು ಯತ್ನಿಸುತ್ತಾನೆ. ಇದರಿಂದ ಸಾಲುಗಟ್ಟಿ ನಿಂತ ವಾಹನ ಸವಾರರಿಗೆ ಕೆಲವು ಸಮಯ ಕಿರಿಕಿರಿ ಉಂಟಾಗಿದೆ.

ಕಾರು ಚಾಲಕ ಕಿರಿಯಾದ ಜಾಗದಲ್ಲಿ ಕಾರು ನುಗ್ಗಿಸಿ ಮತ್ತೊಂದು ಕಾರಿಗೆ ತಾಕಿಸಿದ್ದಾನೆ. ಇದಕ್ಕೆ ಕೋಪಗೊಂಡ ಮತ್ತೊಂದು ಕಾರಿನಲ್ಲಿರುವ ವ್ಯಕ್ತಿ ಈತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಭಯಗೊಂಡ ಕಾರಿನ ಚಾಲಕ ಆತನ ಮೇಲೆ ಕಾರನ್ನು ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.

 

 


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ