ಬಾಗಲಕೋಟೆ: ನಗರದ ನವನಗರ ಪ್ರದೇಶದಲ್ಲಿ ಬೀದಿಗೂಳಿಗಳ ಹಾವಳಿ ಮಿತಿಮೀರಿದ್ದು, ದಾರಿಹೋಕ ವೃದ್ಧರೊಬ್ಬರ ಮೇಲೆ ಗೂಳಿಯೊಂದು ಅತ್ಯಂತ ಭೀಕರವಾಗಿ ದಾಳಿ ನಡೆಸಿರುವ ದೃಶ್ಯ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ನಗರದ ಡಿಸಿ ಕಚೇರಿ ಸರ್ಕಲ್ ಬಳಿಯೇ ಈ ಭಯಾನಕ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಬೆನ್ನತ್ತಿದ ಗೂಳಿ, ಅವರ ಮೇಲೆ ಎರಗಿ ಕೊಂಬಿನಿಂದ ಎತ್ತಿ ನೆಲಕ್ಕೆ ಬಿಸಾಡಿದೆ. ಗೂಳಿಯ ದಿಢೀರ್ ದಾಳಿಯಿಂದ ಕಂಗಾಲಾದ ವೃದ್ಧರು ಜೀವಭಯದಿಂದ ಅದರಿಂದ ತಪ್ಪಿಸಿಕೊಳ್ಳಲು ಪರದಾಡಿದ್ದಾರೆ
ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಹಾಗೂ ಗೂಳಿ ಹಿಡಿಯಲು ಬಂದಿದ್ದ ನಗರಸಭೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಗೂಳಿಗೆ ಕಲ್ಲು ತೂರಿ, ಕಿರುಚಾಡಿ ಅದನ್ನು ದೂರ ಓಡಿಸುವ ಮೂಲಕ ವೃದ್ಧನನ್ನು ಭೀಕರ ಅನಾಹುತದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಪ್ರಮುಖ ಕೇಂದ್ರವಾಗಿರುವ ಡಿಸಿ ಕಚೇರಿ ಸರ್ಕಲ್ ಬಳಿಯೇ ಬೀದಿಗೂಳಿಗಳು ಸಾರ್ವಜನಿಕರ ಪ್ರಾಣಕ್ಕೆ ಕಂಟಕವಾಗುತ್ತಿವೆ. ನಗರಸಭೆ ಸಿಬ್ಬಂದಿ ಗೂಳಿಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದು, ಶೀಘ್ರದಲ್ಲೇ ನಗರದಲ್ಲಿರುವ ಎಲ್ಲಾ ಬೀದಿಕನಸು/ಗೂಳಿಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Laxmi News 24×7