ರಾಯಚೂರು: ಲಿಂಗಸುಗೂರು ತಾಲೂಕಿನಲ್ಲಿ ಎಸ್ಐಆರ್ ಕಾರ್ಯದಲ್ಲಿ ತೊಡಗಿರುವ ಬಿಎಲ್ಒಗಳು ಮೊಬೈಲ್ಗೆ ನೆಟ್ವರ್ಕ್ ಇಲ್ಲದೇ ಪರದಾಡಿದ್ದಾರೆ. ನೆಟ್ವರ್ಕ್ಗಾಗಿ ಮೊಬೈಲ್ಹಾಗೂ ದಾಖಲೆಗಳನ್ನು ಹಿಡಿದು ಬೆಟ್ಟ ಏರಿದ್ದಾರೆ.
ಬೆಟ್ಟ ಪ್ರದೇಶದ ಗೋಲಪಲ್ಲಿ, ಸುಗೂರುದೊಡ್ಡಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ನಲ್ಲಿ ಮಾಹಿತಿ ಭರ್ತಿಮಾಡಲು ಬಿಎಲ್ಒಗಳು ಎತ್ತರದ ಬೆಟ್ಟಗಳನ್ನು ಏರಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ದೇವಮ್ಮ, ರಾಧಾ ಗೌಡಪ್ಪ ಅವರು ಮೂರು ಅಂಗನವಾಡಿ ಕೇಂದ್ರ ವ್ಯಾಪ್ತಿಯ 350 ಮನೆಗಳ ಎಸ್ಐಆರ್ ಕಾರ್ಯ ನಡೆಸಿದ್ದಾರೆ.
ನಗರ ಪ್ರದೇಶದಲ್ಲಿ ಕೆಲವೆಡೆ ಮನೆ ಮನೆಗೆ ತೆರಳದ ಬಿಎಲ್ಒಗಳ ಮಧ್ಯೆ, ಬೆಟ್ಟ ಹತ್ತುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಎಸ್ಐಆರ್ ಪ್ರಕ್ರಿಯೆ ಮುಗಿಸಲು ಪರದಾಡುತ್ತಿದ್ದಾರೆ.
ಗ್ರಾಮಸ್ಥರು ಬಿಎಲ್ಒಳ ಮುಂದೆ ತಮ್ಮ ಸಮಸ್ಯೆಗಳನ್ನ ತೋಡಿಕೊಳ್ಳುತ್ತಿದ್ದು, ಸರ್ಕಾರಕ್ಕೆ ನಮ್ಮ ಕಷ್ಟಗಳನ್ನ ತಲುಪಿಸಿ ಅಂತ ಕೇಳಿಕೊಳ್ಳುತ್ತಿದ್ದಾರೆ. ರಸ್ತೆ, ಕುಡಿಯುವ ನೀರಿನ ಸಮಸ್ಯೆ ಕೇಳುವವರಿಲ್ಲ. ನೀವಾದ್ರೂ ಗ್ರಾಮಕ್ಕೆ ಬಂದಿದ್ದೀರಿ ನಮ್ಮ ಕಷ್ಟ ಕೇಳಿ ಅಂತಿದ್ದಾರೆ.
Laxmi News 24×7