ಧಾರ್ಮಿಕ ಪ್ರವಚಣ(ದಸ್ತಾರ-ಇ-ಹಿಫ್ಜ್) ಕಾರ್ಯಕ್ರಮವು ಸಸಿಗೆ ನೀರು ನೀಡುವುದರ ಮೂಲಕ ಉದ್ಘಾಟನೆ.
ಘಟಪ್ರಭಾ: ಘಟಪ್ರಭಾದ ಜುಮ್ಮಾ ಮಸ್ಜಿದ್ (ಸುನ್ನಿ) ಮೊಹ್ಮದಿಯಾ ಮಸ್ಜಿದ್ ಘಟಪ್ರಭಾ,ನೂರಾನಿ ಮಸ್ಜಿದ್ ಬಸವ ನಗರ (ದುಪಧಾಳ),ದಾರುಲ್ ಉಲೂಮ್ ಮೊಹ್ಮದಿಯಾ ರಿಝವಿಯಾ ದುಪಧಾಳ ಹಾಗೂ ಘಟಪ್ರಭಾ ಪಟ್ಟಣದ ಅಹಲೇ ಸುನ್ನತ-ವಲ್ ಜಮಾತದ ಯಂಗ್ ಕಮೀಟಿಗಳ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ ಪೈಗಂಬರರ ಜಯಂತಿ,ಈದ್ ಮೀಲಾದ ಹಬ್ಬದ 1500ನೇ ವರ್ಷಾಚರಣೆ ಹಾಗೂ ಉರುಸೇ ಕ್ವಾಜಾ ಗರೀಬ್ ನವಾಜ, ದಸ್ತಾರ-ಇ-ಹಿಫ್ಜ್ ಇವುಗಳ ಪ್ರಯುಕ್ತ ಧಾರ್ಮಿಕ ಪ್ರವಚಣ ಕಾರ್ಯಕ್ರಮವನ್ನು ಸಸಿಗೆ ನೀಡುವುದರ ಮೂಲಕ ಕಾರ್ಮಿಕ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರು ಶನಿವಾರದಂದು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಮುಖ್ಯ ಅಹ್ವಾನಿತರಾಗಿ ಮುಫ್ತಿ ಸಲ್ಮಾನ್ ಅಝಾರಿ (Mufti Salman Azhari) ಅವರು ಖ್ಯಾತ ಇಸ್ಲಾಮಿಕ್ ವಿದ್ವಾಂಸರು ಮತ್ತು ಧಾರ್ಮಿಕ ಪ್ರವಚಣಗಾರರು ಆಗಮಿಸಿ ವೇದಿಕೆಯಲ್ಲಿ ಮಾತನಾಡಿದರು.
ಘಟಪ್ರಭಾದ ಧುಪದಾಳ ಕೆ.ಐ.ಡಿ ಕಾಲೋನಿ ಮೈದಾನದಲ್ಲಿ ಕ್ರಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು
ಪ್ರವಚಣ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು,ಯುವಕರು ಐದು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ # ಭಾಗವಹಿಸಿ ಕಾರ್ಯಕ್ರಮವನ್ನು ಯಸಶ್ವಿಗೊಳಿಸಿದರು.
Laxmi News 24×7