ಧಾರವಾಡದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಅಗ್ನಿ ಅವಘಡಗಳು…. ಕಾಳೆದಿನದ ಓಮನಿ ಕಾರ್ ಅಗ್ನಿ ದುರಂತ ಮಾಸುವ ಮುನ್ನವೇ ಟೀ ಪಾಯಿಂಟ್ ಗೆ ಬೆಂಕಿ….
ಅದ್ಯಾಕೋ ಎನೋ ಧಾರವಾಡದಲ್ಲಿ ಅಗ್ನಿ ಅವಘಡಗಳು ಒಂದಾದರ ಮೇಲೊಂದು ಅಗ್ನಿ ದುರಂತಗಳು ಸಂಭವಿಸುತ್ತಲೇ ಇದ್ದು, ಕಳೆದ ದಿನ ಸೋಮುವಾರ ಓಮನಿ ಕಾರ್ ಧಗಧಗನೆ ಹೊತ್ತಿ ಉರಿದ ಘಟನೆ ಮಾಸುವ ಮುನ್ಮವೇ ಇಂದು ಮತ್ತೊಂದು ಟೀ ಶಾಪ ಅಂಗಡಿಗೆ ಬೆಂಕಿ ತಗುಲಿದೆ.
ಹೌದು …ಧಾರವಾಡ ಮುರುಘರಾಜೇಂದ್ರ ನಗರದ ಎಂ ಆರ್ ನಗರದಲ್ಲಿ ಓಮನಿ ಕಾರಿಗೆ ಕಳೆದ ದಿನ ಸಿಲಿಂಡರ್ ಲೀಕ್ನಿಂದ ಬೆಂಕಿ ಹೊತ್ತಿಕೊಂಡು ಜನರನ್ನು ಬೆಚ್ಚಿ ಬಿಳಿಸುತ್ತು. ಆದರೆ ಈ ಘಟನೆ ಮಾಸು ಮುನ್ಮವೇ ಧಾರವಾಡದ ಎಮ್ಮಿಕೇರಿಯಲ್ಲಿ ಟೀ ಶಾಪಗೆ ಬೆಂಕಿ ತಗಲಿ ಹೊತ್ತಿ ಉರಿದಿದ್ದು,
ಅನಾಹುತವೊಂದು ತಪ್ಪಿದೆ. ಬೆಂಕಿ ತಗುಲಿರುವುದನ್ನು ನೋಡುತ್ತಿದಂತೆ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಯವರು ಬೆಂಕಿ ನಂದಿಸಿ ದೊಡ್ಡಮಟ್ಟದ ಹಾನಿಯನ್ನು ತಪ್ಪಿಸಿದ್ದಾರೆ. ಸಾರ್ವಜನಿಕರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.
Laxmi News 24×7