ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ನಿ. ಖಾನಾಪೂರ. ಸಾವಳಗಿ. ಉದ್ಘಾಟನಾ ಸಮಾರಂಭ
ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ನಿ. ಖಾನಾಪೂರ. ಸಾವಳಗಿ. ಉದ್ಘಾಟನಾ ಸಮಾರಂಭದ ಗೌರವ ಅಧ್ಯಕ್ಷರು ಶೂನ್ಯ ಸಿಂಹಾಸನಾಧೀಶ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಸಿದ್ದಸಂಸ್ಥಾನಪೀಠ ಸುಕ್ಷೇತ್ರ ಸಾವಳಗಿ ಆರ್ಶೀವಚನ ನೀಡಿದರು
“ಸಹಕಾರ ಚಳವಳಿಯು ಗ್ರಾಮೀಣಾಭಿವೃದ್ಧಿಗೆ ಬೆನ್ನೆಲುಬಾಗಿದ್ದು, ಇಂಥ ಸಂಘಗಳ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಸ್ವಾವಲಂಬನೆ ನೀಡಲು ಸಾಧ್ಯ. ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘದ ಸ್ಥಾಪನೆಯು ಸಮಾಜದಲ್ಲಿ ಹೊಸ ಚೈತನ್ಯವನ್ನು ಸೃಷ್ಟಿಸುತ್ತದೆ.
ಬಸವಣ್ಣನವರು ಹೇಳಿದಂತೆ, ‘ಕಾಯಕವೇ ಕೈಲಾಸ’ ಎಂಬ ತತ್ತ್ವವನ್ನು ನಾವು ಅನುಸರಿಸಿ, ಪರಿಶ್ರಮದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸಹಕಾರದಿಂದಲೇ ಶ್ರೇಯಸ್ಸು, ಸಹಕಾರದಿಂದಲೇ ಪ್ರಗತಿ. ಈ ಸಂಘವು ಎಲ್ಲರ ಒಗ್ಗಟ್ಟಿಗೆ ವೇದಿಕೆಯಾಗಲಿ’ ಎಂದು ಆಶೀರ್ವಾದ ನೀಡಿದರು
Laxmi News 24×7