ಬಾಗಲಕೋಟೆ, ಏಪ್ರಿಲ್ 14: ರಾಜಕಾರಣಿಗಳು ಕೇವಲ ತಮ್ಮ ರಾಜಕೀಯ ತೆವಲಿಗೋಸ್ಕರ ಮಠಾಧೀಶರನ್ನು (seers) ಮತ್ತು ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಕೂಡಲಸಂಗಮ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು, ರಾಜಕಾರಣಿಗಳು ಮಠಾಧಿಪತಿಗಳ ಬಗ್ಗೆ ಇಟ್ಟುಕೊಂಡಿರುವ ಧೋರಣೆ ಬಗ್ಗೆ ಗೊತ್ತಿಲ್ಲ ಅದರೆ ತಮ್ಮಲ್ಲಿಗೆ ಬರುವ ಎಲ್ಲರಿಗೂ ತಾವು ಸಹಾಯ ಮಾಡಿ ಸಹಕಾರ ನೀಡಿದ್ದೇವೆ, ತಮ್ಮ ಸಹಾಯವನ್ನು ಸದುಪಯೋಗ ಮಾಡಿಕೊಂಡಿದ್ದರೆ ಎಲ್ಲರಿಗೂ ಒಳ್ಳೆಯದು, ದುರುಪಯೋಗ ಮಾಡಿಕೊಂಡಿದ್ದರೆ ಅದನ್ನು ಭಗವಂತ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.
Laxmi News 24×7