ಆದಾಯ, ವೆಚ್ಚ, ತೈಲೋತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ…ಇವು ಇದೀಗ ಜನಸಾಮಾನ್ಯರ ದೈನಂದಿನ ಚರ್ಚೆಯ ವಿಷಯಗಳು. ಬೇಸಗೆಯ ಸುಡುಬಿಸಿಲಿನ ಝಳಕ್ಕಿಂತಲೂ ಬೆಲೆ ಏರಿಕೆಯ ಬಿಸಿ ಶ್ರೀಸಾಮಾನ್ಯರನ್ನು ಹೆಚ್ಚು ತಟ್ಟತೊಡಗಿದೆ. ಕಳೆದ ವರ್ಷವಿಡೀ ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನಸಾಮಾನ್ಯರು ಮೈಕೊಡವಿ ಎದ್ದುನಿಲ್ಲುವ ಪ್ರಯತ್ನದಲ್ಲಿರುವಾಗಲೇ ಬೆಲೆ ಏರಿಕೆ ಹೊಡೆತ ನೀಡಿದೆ. ಬೆಲೆ ಏರಿಕೆಗೆ ಸರಕಾರ ಬೆಟ್ಟು ಮಾಡುತ್ತಿರುವುದು ಕಚ್ಚಾ ತೈಲ ಬೆಲೆ ಹೆಚ್ಚಳದತ್ತ. ವಾಸ್ತವವಾಗಿ ಕಳೆದ ಏಳು ವರ್ಷಗಳಲ್ಲಿ ಸರಕಾರವು ಪೆಟ್ರೋಲಿಯಂ …
Read More »