ಬೆಳಗಾವಿ: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಮೇ.27ರಂದು ಬೆಳಿಗ್ಗೆ9.30ಕ್ಕೆ ಗೋಕಾಕ್ ನಿರ್ಗಮನ, 10.30ಕ್ಕೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಹ್ವಾಲ ಸ್ವೀಕಾರ, ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ಮೈಸೂರಿಗೆ ತೆರಳಿ ವಾಸವ್ಯ.
ಮೇ .28ರಂದು ಬೆಳಿಗ್ಗೆ 8ಗಂಟೆಗೆ ಸುತ್ತೂರು ಮಹಾಸಂಸ್ಥಾನದ ಸ್ವಾಮಿಜೀಯೊಂದಿಗೆ ಮಾತುಕತೆ, 9 ಗಂಟಗೆ ಗಣಪತಿ ಸಚ್ಛಿದಾನಂದ ಆಶ್ರಮಕ್ಕೆ ಭೇಟಿ, 11.30ಕ್ಕೆ ಮೈಸೂರಿಂದ ಹೊರಟು 12.30ಕ್ಕೆ ಕಬಿನಿ ಜಲಾಶಯ ಪರಿವೀಕ್ಷಣೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ಬಳಿಕ ಅಲ್ಲಿಂದ 2.30ಕ್ಕೆ ಹೊರಟು 3.30ರಿಂದ 4.30ರವರೆಗೆ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ 7 ಗಂಟೆಗೆ ಬಿಜೆಪಿ ಹಿರಿಯ ನಾಯಕ ಚಾಮರಾಜನಗರ ಲೋಕಸಭಾ ಸದಸ್ಯ ಶ್ರಿನಿವಾಸ್ ಪ್ರಸಾದ್ ಭೇಟಿ ಮಾಡಲಿದ್ದಾರೆ. ಮೈಸೂರಲ್ಲಿ ವಾಸ್ತವ್ಯ.
ಮೇ.29ರಂದು ಬೆಳಿಗ್ಗೆ 9.30ಕ್ಕೆ ನಿರ್ಗಮನ, 10 ಗಂಟೆಗೆ ಸುತ್ತೂರು ಏತ ನೀರಾವರಿ ಯೋಜನೆ-1 ಪರೀವಿಕ್ಷಣೆ, 12.30ಕ್ಕೆ ಸರಗುರ್-ಗುಂಡಾಲ್ ಏತ ನೀರಾವರಿ ಯೋಜನೆಯ ಹೆಡ್ ವರ್ಕ್ಸ್ ಕಾಮಾಗಾರಿ ವೀಕ್ಷಣೆ,1.30ಕ್ಕೆ ಗುಂಡಾಲ್ ಜಾಲಶಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.