Breaking News
Home / ಜಿಲ್ಲೆ / ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುಕಾಲದ ದೊಡ್ಡ ಕನಸೊಂದು ಈಗ ನನಸಾಗುವ ಹಂತಕ್ಕೆ…….

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುಕಾಲದ ದೊಡ್ಡ ಕನಸೊಂದು ಈಗ ನನಸಾಗುವ ಹಂತಕ್ಕೆ…….

Spread the love

ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುಕಾಲದ ದೊಡ್ಡ ಕನಸೊಂದು ಈಗ ನನಸಾಗುವ ಹಂತಕ್ಕೆ ಬಂದು ನಿಂತಿದೆ. ರಾಜಹಂಸಗಡದಲ್ಲಿ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ  ನಿರ್ಮಾಣವಾಗುತ್ತಿದ್ದು, ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
​  ಐತಿಹಾಸಿಕ ಹಿನ್ನೆಲೆಯ ಸ್ಥಳವಾಗಿರುವ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯನ್ನು  ನಿರ್ಮಾಣ ಮಾಡಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲಿ. ಇದಕ್ಕಾಗಿ  ಹಲವಾರು ವರ್ಷಗಳಿಂದ ಗಣ್ಯ ನಾಯಕರುಗಳು, ಜನ ಪ್ರತಿನಿಧಿಗಳು ಎಲ್ಲರೂ ಮೂರ್ತಿಯನ್ನು ನಿರ್ಮಾಣ ಮಾಡುವುದಾಗಿ ಕನಸುಗಳನ್ನು ಕಟ್ಟಿಕೊಂಡಿದ್ದರು. ಆ ಭಾಗದ ಜನರಿಗೆ ಭರವಸೆಯ ಮೇಲೆ ಭರವಸೆಯನ್ನೂ ಕೊಟ್ಟಿದ್ದರು.
 ಆದರೆ ಈ‌ ಮೂರ್ತಿಯ ನಿರ್ಮಾಣದ ಕೆಲಸ ಕನಸಾಗಿಯೇ ಉಳಿದಿತ್ತು. ಯಾರಿಂದಲೂ ಅದು ಸಾಕಾರಗೊಳ್ಳಲಿಲ್ಲ. ಈ ಭಾಗದ ಜನರೂ ಭರವಸೆಯನ್ನೇ ಕಳೆದುಕೊಂಡಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗುತ್ತಿದ್ದಂತೆ ಅಲ್ಲಿನ ಕೆಲವರಿಂದ ಇಂತಹ ಬೇಡಿಕೆ ಬಂದಿತು. ಕೂಡಲೇ ಕಾರ್ಯಪ್ರವೃತ್ತರಾದ ಹೆಬ್ಬಾಳಕರ್, ಇದಕ್ಕಾಗಿ ಸಂಪೂರ್ಣ ಅಧ್ಯಯನ ನಡೆಸಿದರು. ಅಧಿಕಾರಿಗಳ ಸಹಾಯದಿಂದ ಪ್ರಸ್ತಾವನೆ ಸಿದ್ಧಪಡಿಸಿದರು.
 ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಯ ಜೊತೆಗೆ ಸಂಪೂರ್ಣ ರಾಜಹಂಸಗಡ ಪರಿಸರವನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆನ್ನುವ ಕನಸಿನೊಂದಿಗೆ ಮುಂದಡಿ ಇಟ್ಟರು.
  ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ  ಡಿ. ಕೆ. ಶಿವಕುಮಾರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ಈ ಮೂರ್ತಿಯನ್ನು ಹೇಗಾದರೂ ಮಾಡಿ ತಲೆ ಎತ್ತಿ ನಿಲ್ಲಿಸಬೇಕು ಎನ್ನುವ ಆಶಾಭಾವನೆಯೊಂದಿಗೆ ಡಿ. ಕೆ. ಶಿವಕುಮಾರ ಅವರ ಜೊತೆ ಈ ವಿಷಯದ ಬಗ್ಗೆ ಚರ್ಚಿಸಿದ ಲಕ್ಷ್ಮಿ ಹೆಬ್ಬಾಳಕರ್, ಸರ್ಕಾರದ ವತಿಯಿಂದ ಐವತ್ತು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸಿದರು. ನಂತರ ಕ್ಷೇತ್ರದ ಜನರ ಉಪಸ್ಥಿತಿಯಲ್ಲಿ ಮೂರ್ತಿಯ ನಿರ್ಮಾಣದ ಕೆಲಸಕ್ಕೆ ಅಧಿಕೃತವಾಗಿ  ಚಾಲನೆಯನ್ನು ನೀಡಲಾಯಿತು.
 ಜೊತೆಗೆ  ರಾಜಹಂಸ ಕೋಟೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ಮಂತ್ರಿಗಳಾಗಿದ್ದ ಸಾ. ರಾ. ಮಹೇಶರವರಿಂದ  5 ಕೋಟಿ ರೂಪಾಯಿ ಅನುದಾನವನ್ನು  ಬಿಡುಗಡೆ ಮಾಡಿಸಿ ಆದೇಶ ಹೊರಡಿಸಲಾಯಿತು. ಜೊತೆಗೆ ಈಗಿನ ಸರ್ಕಾರ ಮತ್ತೆ 3 ಕೋಟಿ ರೂಪಾಯಿಗಳನ್ನು‌ ಮಂಜೂರು ಮಾಡಿತು.
ಈ ಎಲ್ಲ ಹಣ ಸೇರಿಸಿ ರಾಜಹಂಸಗಡದ ಅಭಿವೃದ್ಧಿ ಕಾಮಗಾರಿ ಶರವೇಗದಿಂದ ನಡೆಯುತ್ತಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ರಾಜಹಂಸಗಡಕ್ಕೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಕಾಮಗಾರಿ ಮತ್ತು ಇನ್ನಿತ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿ, ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ,  ಅರವಿಂದ ಪಾಟೀಲ, ಮನೋಹರ ಚೌಗುಲೆ, ಭರಮಾ ಪಾಟೀಲ, ಎಸ್ ಎಂ ಬೆಕವಾಟಕರ್, ಅನಿಲ ಪಾಟೀಲ, ಬಾಬು ಚೌಗುಲೆ, ಧಾಕುಲ್ ಇಂಗಳೆ, ಜಯರಾಮ ಪಾಟೀಲ, ಮನು ಚೌಗುಲೆ, ಸಿಪ್ಪಯ್ಯಾ ಬುರಾಳಕಟ್ಟಿ, ಹನಮಂತ ನಾವಗೆಕರ, ಗಂಗಾಧರ ಪವಾರ, ಶಾಂತಾರಾಮ, ಪ್ರಭಾಕರ ಪಾಟೀಲ, ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ  ರಸ್ತೆಯ ಕಾಮಗಾರಿಗಳು, ನೀರಾವರಿಯ ಕಾಮಗಾರಿಗಳು, ಒಳಚರಂಡಿ ಹಾಗೂ ಗಟಾರಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ​ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಿರಂತರ ​ನಡೆಯುತ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವುದು ಕ್ಷೇತ್ರದ ಚಿತ್ರಣವೇ ಬದಲಾಗುವುದಕ್ಕೆ ಕಾರಣವಾಗಿದೆ.

Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ