ನವದೆಹಲಿ : ಆರೋಪಿ ಅಮೀರ್ ಈ ಕೊಲೆ ಮಾಡಲಾಗಿದ್ದು ಘಟನೆಯಲ್ಲಿ ತಂದೆ ತೀವ್ರವಾಗಿ ಗಾಯಗೊಳಿಸಿದ ಬಳಿಕ ತಾನುಕೂಡ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಸಿದ್ದ ಎನ್ನಲಾಗಿದೆ ಸದ್ಯ ತಂದೆ ಮತ್ತು ಮಗ ಇಬ್ಬರೂ ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.ವರದಿಗಳ ಪ್ರಕಾರ, ಜಿಲ್ಲೆಯ ಖಾರ್ಖೋಡಾ ಪಟ್ಟಣದ ಜಮ್ನಗರದಲ್ಲಿ ಗುರುವಾರ ಈ ಘಟನೆ ನಡೆದಿದ್ದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದ್ದು, ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ.ಗೇಮಿಂಗ್ನಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಡೆಯುವಂತೆ ತನ್ನ ಮಗ ಅಮೀರ್ಗೆ ಇರ್ಫಾನ್ ಹೇಳುತ್ತಿದ್ದ ಹಾಗೇ .
ತಂದೆಯ ಟೀಕೆಗಳಿಂದ ಬೇಸರಗೊಂಡ ಅಮೀರ್ ಚಾಕುವನ್ನು ಎತ್ತಿಕೊಂಡು ತಂದೆಯನ್ನು ಕುತ್ತಿಗೆಗೆ ಹಲವು ಬಾರಿ ಕಡಿದು ನಂತರ ತಾನೂ ಕೂಡ ತನ್ನ ಕುತ್ತಿಗೆಗೆ ಕತ್ತರಿಸಿಕೊಂಡಿದ್ದಾನೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ ಮಾದಕ ವ್ಯಸನಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಯುವಕರ ಕುಟುಂಬ ತಿಳಿಸಿದೆ ಎಂದು ಇನ್ಸ್ಪೆಕ್ಟರ್ ಅರವಿಂದ ಮೋಹನ್ ಶರ್ಮಾ ತಿಳಿಸಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.