Breaking News
Home / ರಾಜಕೀಯ / ದಿನಕ್ಕೆ 70 ಸಾವಿರ ರೂಪಾಯಿ ಆಫರ್: ರಾಜ್​ ಕುಂದ್ರಾ ಕಂಪನಿ​ಯ ಕರಾಳತೆ ಬಿಚ್ಚಿಟ್ಟ ಮಾಡೆಲ್​!

ದಿನಕ್ಕೆ 70 ಸಾವಿರ ರೂಪಾಯಿ ಆಫರ್: ರಾಜ್​ ಕುಂದ್ರಾ ಕಂಪನಿ​ಯ ಕರಾಳತೆ ಬಿಚ್ಚಿಟ್ಟ ಮಾಡೆಲ್​!

Spread the love

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ಬಂಧನವು ಸದ್ಯದ ಮಟ್ಟಿಗೆ ಬಹು ಚರ್ಚಿತ ವಿಷಯವಾಗಿದೆ. ಕುಂದ್ರಾ ಬಂಧನವಾದಾಗಿನಿಂದ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ.

ಹಾಟ್​ಶಾಟ್ಸ್​ ಮತ್ತು ಇತರೆ ವೆಬ್​ಸೈಟ್​ಗಳಿಗಾಗಿ ಬೋಲ್ಡ್​ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್​ ಜೊಯಾ ರಾಥೋಡ್ ಅವರು ರಾಜ್​​ ಕುಂದ್ರಾರಿಂದ ಆಫರ್​ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ​

ಹಾಟ್​ಶಾಟ್ಸ್​ ಆಯಪ್​ಗಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸುವಂತೆ ಕುಂದ್ರಾ ಅವರ ಆಪ್ತ ಸಹಾಯಕ ಮತ್ತು ಉದ್ಯಮ ಪಾಲುದಾರ ಉಮೇಶ್​ ಕಾಮತ್​, ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುಂಚೆ ಕಾಮತ್​ ಜೊಯಾಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದರಂತೆ. ನಾನು ಹೊರಗಿರುವುದರಿಂದ ಆಫೀಸ್​ನಲ್ಲಿ ಆಡಿಷನ್​ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕಾಮತ್​, ವಾಟ್ಸ್​ಆಯಪ್​ ಮೂಲಕವೇ ಬೆತ್ತಲೇ ಆಡಿಷನ್​ ನೀಡುವಂತೆ ಜೊಯಾಗೆ ಕೇಳಿದ್ದರಂತೆ. ಆತನ ಮನವಿಗೆ ನಿರಾಕರಿಸಿದರೂ ಪದೇಪದೆ ಕರೆ ಮಾಡುತ್ತಿದ್ದರು ಎಂದು ಜೊಯಾ ಆರೋಪಿಸಿದ್ದಾರೆ.

ಸ್ಕ್ರಿಪ್ಟ್​ ತಿಳಿಯದೇ ಬೆತ್ತಲೆ ಆಡಿಷನ್​ ಕೊಡಲಾಗದು ಎಂದು ಜೊಯಾ ನಿರಾಕರಿಸಿದರೂ ಆಫರ್​ ಒಪ್ಪಿಕೊಳ್ಳುವಂತೆ ಕಾಮತ್​ ದುಂಬಾಲು ಬಿದ್ದಿದ್ದನಂತೆ. ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರೆ ದಿನಕ್ಕೆ 20 ಸಾವಿರ ರೂ. ಕೊಡುವುದಾಗಿ ಆಫರ್​ ನೀಡಿದ್ದರು ಎಂದು ಜೊಯಾ ತಿಳಿಸಿದ್ದಾರೆ.

ಹಾಟ್​ಶಾಟ್ಸ್​ಗಾಗಿ ಕೆಲಸ ಮಾಡುವ ರಾಯ್​ ಎಂಬಾತನೂ ಸಹ ಇದೇ ವಿಚಾರಕ್ಕೆ ಕರೆ ಮಾಡಿದ್ದ. ತಾನೂ ಯುಕೆ ಮೂಲದವನು ಎಂದು ಹೇಳಿಕೊಂಡಿದ್ದ. ಹಾಟ್​ಶಾಟ್ಸ್​ಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆ ವೆಬ್​ಸೀರಿಸ್​ ಮಾಡುತ್ತಿರುವುದಾಗಿ ಹೇಳಿದ. ನಮ್ಮೊಂದಿಗೆ ಕೆಲಸ ಮಾಡಲು ಒಪ್ಪಿದರೆ ದಿನವೊಂದಕ್ಕೆ 70 ಸಾವಿರ ರೂ. ಕೊಡುವುದಾಗಿ ಆಫರ್​ ಮಾಡಿದ ಎಂದು ಜೊಯಾ ಆರೋಪ ಮಾಡಿದ್ದಾರೆ. ಆಫರ್​ ನಿರಾಕರಿಸಿದಾಗ ಬೋಲ್ಡ್​ ಸಿನಿಮಾಗಳಲ್ಲೇ ನಟಿಸಿರುವಾಗ ಬೆತ್ತಲೆ ವೆಬ್​ ಸೀರಿಸ್​ನಲ್ಲಿ ನಟಿಸಲು ನಿಮಗೇನು ಸಮಸ್ಯೆ ಎಂದು ರಾಯ್​ ಕೇಳಿದ್ದನಂತೆ. ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಮನವೊಲಿಸಲು ಸಾಕಷ್ಟು ಮನಸ್ಸು ಮಾಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ ಜೊಯಾ.

ಇನ್ನು ಜೊಯಾ ಅವರು ಬಡೆ ಅಚ್ಚೇ ಲಗ್ತೆ ಹೈನ್​, ಸೌಭಾಗ್ಯವತಿ ಭವ ಮತ್ತು ಫಿಯರ್​ ಫೈಲ್ಸ್​ ಹೆಸರಿನ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. 2011ರಿಂದ ಬೋಲ್ಡ್​ ಸಿನಿಮಾಗಳಲ್ಲಿ ಜೊಯಾ ನಟಿಸುತ್ತಿದ್ದಾರೆ. ಆದರೆ, ಬೆತ್ತಲೆಯಾಗಿ ನಟಿಸಲು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ