ಬೆಂಗಳೂರು : ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ಹಂತದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಅನ್ನೋದು ಸಹಜ. ಇದಕ್ಕೆ ಇತಿಶ್ರೀ ಹಾಕಲು ಯತ್ನ ಮಾಡಲಾಗ್ತಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ.
ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರಿಂದ ಕೆಲವು ಕಡೆ ಹೇಳಿಕೆ ಕೊಡಲಾಗ್ತಿದೆ. ಯಾರಿಗೋ ಸೈಡಿಗೆ ಹೋಗಿ ಅಂದರೆ, ಅವನಿಗೆ ನಡೆಯಲು ಅಡ್ಡಿ ಮಾಡಿದಂತಲ್ಲ.
ಆದ್ರೆ ಒಂದು ಹಂತದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಅನ್ನೋದು ಸಹಜ. ಇದಕ್ಕೆ ಇತಿಶ್ರೀ ಹಾಕಲು ಯತ್ನ ಮಾಡಲಾಗ್ತಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಯಾರು ಏನು ಕೆಲಸ ಮಾಡಬೇಕು, ಅದನ್ನು ಮಾಡಬೇಕು. ಅವರವರ ಜವಾಬ್ದಾರಿ ಅದರಷ್ಟಕ್ಕೆ ನಡೆಯಲಿದೆ. ನಮ್ಮ ಉದ್ದೇಶ ಕೊರೊನಾ ಹೊಡೆದೊಡಿಸಬೇಕು.
ನಾವು ಈ ಕೆಲಸ ಮಾಡ್ತಿದ್ದೇವೆ. ಈವರೆಗೆ ನಾವು 20 ಕೋಟಿ ಲಸಿಕೆ ಉತ್ಪಾದನೆ ಮಾಡಿ ಕೊಟ್ಟಿದ್ದೇವೆ. ಈಗ ರೆಮಿಡಿಸಿವಿರ್ ಅಗತ್ಯತೆ ಕಡಿಮೆ ಆಗಿದೆ. ಮೊದಲು ತೊಂದರೆ ಆಗಿದ್ದು ಸಹಜ. ಈಗ ಬ್ಲಾಕ್ ಫಂಗಸ್ ಗೆ ಔಷಧ ಅಗತ್ಯ ಇದೆ ಎಂದರು.