ಬೆಂಗಳೂರು: ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಕರೋನ ರಣಕೇಕೆ ಹಾಕುತ್ತಿದ್ದು, ಈ ನಡುವೆ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜ್ಯದ ಕರೋನಾ ಮಾಹಿತಿ ನೀಡಿದರು. ಈ ವೇಳೇ ರಾಜ್ಯಪಾಲರು ಹಾಗೂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರು ಚರ್ಚೆ ನಡೆಸುತ್ತಿರುವ ವೇಳೆಯಲ್ಲಿ ಗುಜರಾತ್ ನ ಕರೋನಾ ಸ್ಥಿತಿಗತಿ ಪ್ರಸಾರವಾಗುತ್ತಿರುವ ಖಾಸಗಿ ಮಾಧ್ಯಮವೊಂದರ ವರದಿಯ ಫೋಟೋ ಈಗ ವೈರಲ್ ಆಗುತ್ತಿದ್ದು, ರಾಜ್ಯಪಾಲರ ವಿರುದ್ದ ಆರೋಪ ಕೇಳಿ ಬರುತ್ತಿದೆ.
ಈ ನಡುವೆ ಇಂದು ರಾಜ್ಯಪಾಲರು ಹಾಗೂ ಸಚಿವರು, ವಿ.ಪ ನಾಯಕರುಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಇರುವ ಸನ್ನಿವೇಶವನ್ನು ಚರ್ಚಿಸಿ ಯಾವ ರೀತಿಯಲ್ಲಿ ತೀರ್ಮಾನ ಕೈಗೋಳ್ಳಬೇಕು ಎನ್ನುವುದರ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು.