Breaking News

30 ವರ್ಷದ ಬಳಿಕ ನಡೆಯಲಿರುವ ಮುಚ್ಚಂಡಿ ದೇವಿಯರ ಜಾತ್ರೆ ದೇವಿಯರನ್ನು ಬಣಗಾರರ ಮನೆಗೆ ಕಳುಹಿಸಲು ವಿಜೃಂಭಣೆಯ ಮೆರವಣಿಗೆ

Spread the love

30 ವರ್ಷದ ಬಳಿಕ ನಡೆಯಲಿರುವ ಮುಚ್ಚಂಡಿ ದೇವಿಯರ ಜಾತ್ರೆ
ದೇವಿಯರನ್ನು ಬಣಗಾರರ ಮನೆಗೆ ಕಳುಹಿಸಲು ವಿಜೃಂಭಣೆಯ ಮೆರವಣಿಗೆ
30 ವರ್ಷದ ಬಳಿಕ ನಡೆಯಲಿರುವ ಮುಚ್ಚಂಡಿ ದೇವಿಯರ ಜಾತ್ರೆ
ದೇವಿಯರನ್ನು ಬಣಗಾರರ ಮನೆಗೆ ಕಳುಹಿಸಲು ವಿಜೃಂಭಣೆಯ ಮೆರವಣಿಗೆ
ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿ ದೇವಿಯ ಜಾತ್ರೆ
ಧಾರ್ಮಿಕ ವಿಧಾನಗಳೊಂದಿಗೆ ತುಂಬಲಾಯಿತು ದೇವಿಯರ ಉಡಿ
ಸುಮಾರು 30 ವರ್ಷಗಳ ಬಳಿಕ ಮೇ 12, 2026 ರಂದು ನಡೆಯಲಿರುವ ಬೆಳಗಾವಿ ತಾಲೂಕಿನ ಮುಚ್ಚಂಡಿಯ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಹಿನ್ನೆಲೆ ಮೆರವಣಿಗೆಯ ಮೂಲಕ ಶ್ರೀದೇವಿಯ ಮೂರ್ತಿಗಳನ್ನು ಬಣ್ಣಕ್ಕಾಗಿ ಬಣಗಾರರ ಮನೆಗೆ ಕಳುಹಿಸುವ ಕಾರ್ಯಕ್ರಮ ನಡೆಯಿತು.
ಬೆಳಗಾವಿ ತಾಲೂಕಿನ ಮುಚ್ಚಂಡಿಯ ಗ್ರಾಮದೇವಿಯರಾದ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿದೇವಿಯ ಜಾತ್ರಾ ಮಹೋತ್ಸವವು ಸುಮಾರು 30 ವರ್ಷಗಳ ಬಳಿಕ ಮೇ.12 ರಿಂದ ಆರಂಭಗೊಳ್ಳಲಿದೆ. 9 ದಿನಗಳ ಕಾಲ ನಡೆಯುವ ಈ ಉತ್ಸವವು ಸಂಪೂರ್ಣ ಶಾಕಾಹಾರಿಯಾಗಿರಲಿದೆ. ಈ ಹಿನ್ನೆಲೆ ದೇವಿಯ ಮೂರ್ತಿಗಳ ಬಣ್ಣದ ಕಾರ್ಯಕ್ಕಾಗಿ ಬಣಗಾರರ ಮನೆಗೆ ಕಳುಹಿಸುವ ಕಾರ್ಯ ಅತ್ಯಂತ ಭಕ್ತಿಭಾವದಲ್ಲಿ ನಡೆಯಿತು. ಗ್ರಾಮದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು.
ಸುಮಾರು 30 ವರ್ಷದ ಬಳಿಕ ಮುಚ್ಚಂಡಿಯ ಗ್ರಾಮದೇವತೆಯರಾದ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿ ದೇವಿಯ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದೀಪಾವಳಿಯ ನಿಮಿತ್ಯ ದೇವಿಯರ ಮೂರ್ತಿಯನ್ನು ಬಣ್ಣಕ್ಕಾಗಿ ಕಳುಹಿಸಲಾಯಿತು. ಈ ಹಿನ್ನೆಲೆ ಹಕ್ಕುದಾರರಿಂದ ಉಡಿ ತುಂಬುವ ಕಾರ್ಯಕ್ರಮ, ಭವ್ಯ ಮೆರವಣಿಗೆ ನಡೆಸಲಾಯಿತು ಎಂದು ಗ್ರಾಮದ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ