ಕೊಪ್ಪಳ: ರಾಜ್ಯ ಸರ್ಕಾರ ಏಪ್ರಿಲ್ 17ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕೆಂದಿರುವುದು ಜಾತಿ ಗಣತಿಯ ಕುರಿತಲ್ಲ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರ ತಿಳಿಯಲು ಮಾಡಿದ ಸಮೀಕ್ಷೆ. ಅದರಲ್ಲಿ ಜಾತಿ ಕಾಲಂ ಸೇರಿಸಲಾಗಿದೆ ಅಷ್ಟೇ. ಇದು ಕೂಡ ಸ್ವಾಗತಾರ್ಹ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ವೈಜ್ಞಾನಿಕವಾಗಿದೆ. ಶಿಕ್ಷಕರು ಮನೆ ಮನೆಗೆ ಹೋಗಿ ಗಣತಿ ಮಾಡಿದ್ದಾರೆ. ಆದರೆ, ಅದು ಶೇ.100ರಷ್ಟು ಸರಿ ಇದೆಯೋ, ಇಲ್ವೋ? ಎನ್ನುವ ಕುರಿತು ಚರ್ಚೆಯಾಗಬೇಕಿದೆ. ನಮ್ಮ ಪ್ರಕಾರ ಶೇ.96ರಿಂದ 97ರಷ್ಟು ಸರಿಯಾಗಿದೆ ಎಂದರು.ಗಣತಿಯ ಅವಶ್ಯಕತೆ ಇತ್ತು: ಪ್ರತಿ ಹತ್ತು ವರ್ಷಕ್ಕೊಮ್ಮೆ ಗಣತಿಯ ಅವಶ್ಯಕತೆ ಇದೆ. ಇದು ಒಂದು ವರ್ಷದ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಇದೀಗ ಕೇವಲ ಮಂತ್ರಿಗಳ ಬಳಿ ಒಂದೊಂದು ಪ್ರತಿ ಇದೆ. ಎಲ್ಲರೂ ಅದನ್ನು ಓದಬೇಕು. ಲಿಂಗಾಯತರು, ಒಕ್ಕಲಿಗರ ಅಂಕಿಸಂಖ್ಯೆ ಕೇವಲ ಊಹಾಪೋಹ. ಅದರ ಬಗ್ಗೆ ಕಾಮೆಂಟ್ ಮಾಡೋದು ಸರಿ ಅಲ್ಲ. ಕ್ಯಾಬಿನೆಟ್ನಲ್ಲಿ ಚರ್ಚೆಗೆ ತರಲಾಗುತ್ತಿದೆ. ಇದನ್ನು ಯಾವುದೇ ಜಾತಿ, ಧರ್ಮದವರು ವಿರೋಧ ಮಾಡಬಾರದು ಎಂದು ತಿಳಿಸಿದರು.
Laxmi News 24×7