Breaking News

ಸರ್ವ ಧರ್ಮಗಳಲ್ಲಿರಬೇಕು ಶಾಂತಿ-ಸಹಿಷ್ಣುತೆ…

Spread the love

ಸರ್ವ ಧರ್ಮಗಳಲ್ಲಿರಬೇಕು ಶಾಂತಿ-ಸಹಿಷ್ಣುತೆ…
ಕಮತಗಿಯ ರಮಜಾನ್ ಹಬ್ಬದಲ್ಲಿ ಹುಚ್ಚೇಶ್ವರ ಶ್ರೀಗಳ ಆರ್ಶೀವಚನ
ರಮಜಾನ್ ಇದು ಇಸ್ಲಾಂ ಬಾಂಧವರ ಜಪ-ತಪ ಮತ್ತು ಅನುಷ್ಠಾನವನ್ನು ಕೈಗೊಳ್ಳುವ ಹಬ್ಬವಾಗಿದೆ ಎಂದು ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿಗಳು ಹೇಳಿದರು.
May be an image of 4 people
ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್ ಹಿನ್ನೆಲೆ ಸಾಮೂಹಿಕ ನಮಾಜ್ ಅದಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮೀಜಿಗಳು ಮಾತನಾಡಿದರು.
ರಮಜಾನ್ ಇಂದು ಇಸ್ಲಾಂ ಬಾಂಧವರ ಪವಿತ್ರ ಹಬ್ಬವಾಗಿದೆ. ಒಂದು ತಿಂಗಳ ಕಾಲ ಉಪವಾಸ ಕೈಗೊಂಡು, ಚಂದ್ರ ದರ್ಶನ ಬಳಿಕ ರಮಜಾನ್ ಅರ್ಥಾತ್ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ.
ರಮಜಾನ್ ಹಬ್ಬ ಜಪ-ತಪ ಮತ್ತು ಅನುಷ್ಠಾನವನ್ನು ಕೈಗೊಳ್ಳುವ ಹಬ್ಬವಾಗಿದೆ. ಸರ್ವ ಧರ್ಮಗಳಲ್ಲಿಯೂ ಶಾಂತಿ ಸಹಿಷ್ಣುತೆ ಇರಬೇಕೆಂದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ